ಕಾಷ್ಠ ಶಿಲ್ಪಿ  ಸುದರ್ಶನ್ ಆಚಾರ್ಯರ ಸಾಧನೆಗೆ  ಅಮೇರಿಕಾದ ಮಯೋನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಿಂದ ಪುರಸ್ಕಾರ

 

ಉಡುಪಿ:  ರಥ ಶಿಲ್ಪಿ ಸುದರ್ಶನ್ ಆಚಾರ್ಯ ಕಾಷ್ಠಶಿಲ್ಪ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದ್ದು, ಈಗಾಗಲೇ ತಮ್ಮ ಸಾಧನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕಡಿಯಾಳಿ ತಿರುಗುವ ಮುಚ್ಚಿಗೆಯ ನಿರ್ಮಾತೃ ಕಾಷ್ಠ ಶಿಲ್ಪಿ ಇವರಾಗಿದ್ದು ಸದಾ ಕ್ರಿಯಾಶೀಲ ಯೋಚನೆಗಳೊಂದಿಗೆ ಶಿಲ್ಪ ಕಲೆಗಳನ್ನು ಮೂಡಿಸುತ್ತಾ ಜನ ಮನ ಗೆದ್ದಿದ್ದಾರೆ. ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ಇವರು ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಈ ಗೌರವವನ್ನು ನೀಡಿ ಸನ್ಮಾನಿಸಲಾಗಿದೆ.