ಮೇ 9 :ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ, ಅಭಿರಂಗ ಮಕ್ಕಳ ನಾಟಕೋತ್ಸವ

ಉಡುಪಿ: ಜಿಲ್ಲಾ ಬಾಲಭವನ ಬ್ರಹ್ಮಗಿರಿಯ ಬಯಲು ರಂಗಮಂಟಪದಲ್ಲಿ ಮೇ 9 ರಂದು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮತ್ತು ಮಕ್ಕಳ ನಾಟಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 10 ಕ್ಕೆ ಮಣಿಪಾಲ ಬಸ್‍ಸ್ಟಾಂಡ್‍ನಲ್ಲಿ ಬೀದಿ ನಾಟಕ, ಬೆಳಗ್ಗೆ 11 ಕ್ಕೆ ಉಡುಪಿ ಸಿಟಿ ಬಸ್ ಸ್ಟಾಂಡ್‍ನಲ್ಲಿ ಬೀದಿ ನಾಟಕ, ಮಧ್ಯಾಹ್ನ 12 ಕ್ಕೆ ಬನ್ನಂಜೆ ತಾಲೂಕು ಕಚೇರಿ ಎದುರು ಬೀದಿ ನಾಟಕ, ಮಧ್ಯಾಹ್ನ 3.30 ರಿಂದ 4 ರ ವರೆಗೆ ಬ್ರಹ್ಮಗಿರಿ ಬಾಲಭವನದ ಬಯಲು ರಂಗಮಂದಿರದಲ್ಲಿ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ, ಸಂಜೆ 4 ಕ್ಕೆ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.