ಮಣಿಪಾಲ: ಸ್ಕೂಟರ್ ಗೆ ಹಾಲಿನ ವಾಹನ ಡಿಕ್ಕಿ: ಪವಾಡ ಸದೃಶವಾಗಿ ಪಾರಾದ ಮಹಿಳೆ

ಉಡುಪಿ: ರಸ್ತೆ ಕ್ರಾಸ್ ಮಾಡುತ್ತಿದ್ದ ಸ್ಕೂಟರ್ ಗೆ ಹಾಲಿನ ವಾಹನ ಡಿಕ್ಕಿ‌ ಹೊಡೆದ ಪರಿಣಾಮ ಸ್ಕೂಟರ್ ಸವಾರೆ ಗಾಯಗೊಂಡ ಘಟನೆ ಮಣಿಪಾಲ ಪೆರಂಪಳ್ಳಿ ಸಾಯಿರಾಧಾ ಗ್ರೀನ್ ವ್ಯಾಲ್ಯೂ ಮುಂಭಾಗದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಸ್ಕೂಟರ್ ಸವಾರೆ ಸಾಯಿರಾಧಾ ಗ್ರೀನ್ ವ್ಯಾಲ್ಯೂ ನಿವಾಸಿ ಎನ್ನಲಾಗಿದೆ.

ಇವರು ಸ್ಕೂಟರ್ ನಲ್ಲಿ ಗ್ರೀನ್ ವ್ಯಾಲ್ಯೂನಿಂದ ಪೆರಂಪಳ್ಳಿ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದರು.

ಈ ವೇಳೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿದ್ದ ಖಾಸಗಿ ಬಸ್ ನ ಹಿಂಬದಿಯಿಂದ ಬರುತ್ತಿದ್ದ ಹಾಲಿನ ವಾಹನವನ್ನು ಗಮನಿಸದೆ ಸ್ಕೂಟರ್ ಕ್ರಾಸ್ ಮಾಡಿದ್ದಾರೆ‌.

ವೇಗವಾಗಿ ಬರುತ್ತಿದ್ದ ಹಾಲಿನ ವಾಹನ ಸ್ಕೂಟರ್ ಗೆ ಡಿಕ್ಕಿ‌ ಹೊಡೆದಿದೆ. ಇದರಿಂದ ಸವಾರೆ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಕೂಡಲೇ ಬಸ್ ನ ಚಾಲಕ ಹಾಗೂ ನಿರ್ವಾಹಕರು ಓಡಿಬಂದು ಮಹಿಳೆಯನ್ನು ಎತ್ತಿ ಉಪಚರಿಸಿದರು.