ಕಂಟ್ರಿ ಇನ್ ಸ್ಯುಸ್ಟ್ಸ್ ವತಿಯಿಂದ ಪರಿಸರ ದಿನಾಚರಣೆ

ಮಣಿಪಾಲ: ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದ್ದು, ಮಾನವನಿಂದಲೇ ಸರಿಯಾಗಬೇಕಿದೆ. ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ಉಡುಪಿ ಕಂಟ್ರಿ ಇನ್ ಸಂಸ್ಥೆಯ ಮಾನವ ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ರವರು ತಿಳಿಸಿದರು.
ರಾಡಿಸನ್ ಗ್ರೂಪ್ನ ಕಂಟ್ರಿ ಇನ್ ಸ್ಯುಸ್ಟ್ಸ್ ವತಿಯಿಂದ ಪರಿಸರ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಸದಾನಂದ ಕೋಟ್ಯಾನ್, ತಾಂತ್ರಿಕ ಮುಖ್ಯಸ್ಥ ಕಾರ್ತಿಕ್ ದೇವಾಡಿಗ ,ಇಂಜಿನಿಯರಿಂಗ್ ವಿಭಾಗದ ಕಿರಣ್ ಮೋಂತೆರೊ, ಪ್ರವೀಣ್ ಡಿಸೋಜ, ಪ್ರಶಾಂತ್ ಭಕ್ತ ಮಾರ್ಕೆಟಿಂಗ್ ರೂಪೇಶ್ ಕುಮಾರ್ ಹಾಗು ಸಿಬ್ಬಂದಿಗಳು ಭಾಗವಹಿಸಿದ್ದರು. ಮಣಿಪಾಲದ ಎಂಡ್ ಪಾಯಿಂಟ್ ಭಾಗಗಳಲ್ಲಿ  ಮೂವತ್ತಲ್ಕೂ ಹೆಚ್ಚು ಗಿಡಗಳನ್ನು ‌ನೆಡಲಾಯಿತು.‌ ಅದರ ಜೊತೆಗೆ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಯಿತು.