ಮಂಗಳೂರು: ಬಿ-ಆರ್ಕಿಟೆಕ್ಚರ್ ಮತ್ತು ಬಿ- ಪ್ಲ್ಯಾನಿಂಗ್ ಎಕ್ಸ್ಪರ್ಟ್ ವಿದ್ಯಾರ್ಥಿ ಕೆ. ರೆಹಾನ್ ಮೊಹಮ್ಮದ್‌ಗೆ 7ನೇ ರ‍್ಯಾಂಕ್

ಮಂಗಳೂರು: ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ. ರೆಹಾನ್ ಮೊಹಮ್ಮದ್ ಜೆಇಇ ಮೈನ್‌ನ ಬಿ- ಪ್ಲ್ಯಾನಿಂಗ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ೭ನೇ ರ‍್ಯಾಂಕ್ ಹಾಗೂ ಬಿ – ಆರ್ಕಿಟೆಕ್ಚರ್‌ನಲ್ಲಿ 165ನೇ ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ದೇಶದಲ್ಲಿರುವ ಎನ್‌ಐಟಿಗಳಲ್ಲಿನ ಆರ್ಕಿಟೆಕ್ಚರ್ ಕೋರ್ಸ್ನ
ಪ್ರವೇಶಕ್ಕಾಗಿ ನಡೆದ ಪರೀಕ್ಷೆ ಇದಾಗಿದ್ದು, ಜೆಇಇ ಮೈನ್‌ನ ಬಿ –
ಪ್ಲ್ಯಾನಿಂಗ್‌ನಲ್ಲಿ ಶೈವಿ ಕೆ.ಎಚ್. 277ನೇ ರ‍್ಯಾಂಕ್, ವಿಹಾನ್ ಪೂಜಾರಿ 651ನೇ ರ‍್ಯಾಂಕ್, ಅಬ್ದುಲ್ ಖಾದರ್ ಮನ್ಸೂರ್ ಮೋಮಿನ್ 1367ನೇ ರ‍್ಯಾಂಕ್, ಡಿ.ಚಿನ್ಮಯ ಗೌಡ 2109ನೇ ರ‍್ಯಾಂಕ್ (ಕ್ಯಾಟಗರಿಯಲ್ಲಿ 575ನೇ ರ‍್ಯಾಂಕ್),ಅಮೃತ ಸಂತೋಷ ಜಕಾತಿ 6419 ನೇ ರ‍್ಯಾಂಕ್, ಪ್ರಿಯಾಂಕಾ ಯಲಮೇಲಿ 7423 ನೇ ರ‍್ಯಾಂಕ್, ಅನನ್ಯ ಎನ್. 8913 ನೇ ರ‍್ಯಾಂಕ್, ವರ್ಷಾ
ಎಸ್. 9052 ನೇ ರ‍್ಯಾಂಕ್, ಕೆ.ಪಿ. ಹರ್ಷಿಣಿ 9607 ನೇ ರ‍್ಯಾಂಕ್, ಕ್ಯಾಟಗರಿ ವಿಭಾಗದಲ್ಲಿ ಹೃಷಿಕಾ ನಾಯಕ್ ಎಸ್. 337ನೇ ರ‍್ಯಾಂಕ್, ಪೂರ್ವಾ ಸಿ. 695ನೇ ರ‍್ಯಾಂಕ್ ಪಡೆದಿದ್ದಾರೆ.
ಬಿ -ಪ್ಲ್ಯಾನಿಂಗ್‌ನಲ್ಲಿ ಸೃಷ್ಟಿ ಎ.ಪಾಟೀಲ್ ೨೫೩೭ನೇ ರ‍್ಯಾಂಕ್, ವರ್ಷಾ ಎಸ್. 3310ನೇ ರ‍್ಯಾಂಕ್, ಅಪೂರ್ವ ನಾಯ್ಕವಾಡಿ 4200 ನೇ ರ‍್ಯಾಂಕ್, ಕಿರಣ ಯಲಗೊಂಡ ಸುರಗಿಹಳ್ಳಿ 7877 ನೇ ರ‍್ಯಾಂಕ್, ಶ್ರೀ ಆರ್.ಟಿ. 8094ನೇ ರ‍್ಯಾಂಕ್, ಸುಪ್ರಿತ್ ಸುನಿಲ್ ಬ್ಯಾಡಗಿ 8671ನೇ ರ‍್ಯಾಂಕ್ (ಕ್ಯಾಟಗರಿ ವಿಭಾಗದಲ್ಲಿ 2953 ನೇ ರ‍್ಯಾಂಕ್), ಅಬ್ದುಲ್ ಖಾದರ್ ಮನ್ಸೂರ್ ಮೋಮಿನ್
9562ನೇ ರ‍್ಯಾಂಕ್ (ಕ್ಯಾಟಗರಿ ವಿಭಾಗದಲ್ಲಿ 3291ನೇ ರ‍್ಯಾಂಕ್)
ಪಡೆದಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಶ್ರಮದ ಸಾಧನೆಯನ್ನು ಕಾಲೇಜಿನ
ಹಾಗೂ ಆಡಳಿತ ಮಂಡಳಿಯ ಪರವಾಗಿ ಎಕ್ಸ್ಪರ್ಟ್ ಶಿಕ್ಷಣ
ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ರವರು
ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.