ಮಂಗಳೂರು:ಐಐಎಸ್‌ಇಆರ್: ಎಕ್ಸ್ಪರ್ಟ್ನ ಸಿದ್ದೇಶ್‌ಗೆ ,11ನೇ ರ‍್ಯಾಂಕ್

ಮಂಗಳೂರು:ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದ
ಅಧೀನದಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್ (ಐಐಎಸ್‌ಇಆರ್) ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 50 ರ‍್ಯಾಂಕ್‌ಗಳಲ್ಲಿ ಮೂರುರ‍್ಯಾಂಕ್‌ಗಳನ್ನು ಪಡೆದುಕೊಳ್ಳುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ಜನರಲ್ ಕೆಟಗರಿ ವಿಭಾಗದಲ್ಲಿ 11ನೇರ‍್ಯಾಂಕ್ ಅನ್ನು ಸಿದ್ದೇಶ್ ಬಿ. ಡಮ್ಮಳ್ಳಿ ಪಡೆದುಕೊಂಡಿದ್ದಾರೆ. ಅದೇ ರೀತಿ ಜನರಲ್ ಕ್ಯಾಟಗರಿಯಲ್ಲಿ 13ನೇ ಹಾಗೂ ಕ್ಯಾಟಗರಿ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಅನ್ನು ಧನುಷ್ ಎಚ್.ಎಲ್. ಪಡೆದುಕೊಂಡಿದ್ದಾರೆ.

ಉಳಿದಂತೆ ವರುಣ್ ಸಿದ್ದಪ್ಪಗೌಡರ್ 28ನೇ ರ‍್ಯಾಂಕ್, ಸಾಯಿಶ್
ಶ್ರವಣ ಪಂಡಿತ್ 66ನೇ ರ‍್ಯಾಂಕ್, ಭುವನೇಶ್ ಎಂ.ವಿ. 152ನೇ ರ‍್ಯಾಂಕ್, ಸುಚಿತ್ ಪಿ.ಪ್ರಸಾದ್ 167ನೇ ರ‍್ಯಾಂಕ್, ಸ್ನೇಹ ಯರಗಣವಿ 189ನೇರ‍್ಯಾಂಕ್, ಶ್ರೇಯಾ ಎಸ್. ಪಾಟೀಲ್ 474ನೇ ರ‍್ಯಾಂಕ್, ಯಶಸ್ ಯೋಗೀಂದ್ರ 585ನೇ ರ‍್ಯಾಂಕ್, ಪೂಜಾ 635ನೇ ರ‍್ಯಾಂಕ್, ಎಸ್ ಸಂತೋಷ್ ಚರಣ್ 861, ಶುಭಿತ್ ದಂಡಮುಡಿ 1370 ನೇ ರ‍್ಯಾಂಕ್, ಶ್ರೇಯಾ ಎಸ್. 1425ನೇ ರ‍್ಯಾಂಕ್, ಶ್ರೇಯಾನ್ ಕೆ. 2725 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗಳನ್ನು ಸಂಯೋಜಿಸಲು ಮತ್ತು ಉತ್ತೇಜಿಸಲು ಭಾರತ ಸರಕಾರವು ಬೆರ್ಹಾಂಪುರ, ಭೋಪಾಲ್, ಕೋಲ್ಕತ್ತಾ, ಮೊಹಾಲಿ, ಪುಣೆ,
ತಿರುವನಂತಪುರಂ ಮತ್ತು ತಿರುಪತಿಗಳಲ್ಲಿ ಐಐಎಸ್‌ಇಆರ್‌ ಗಳನ್ನು ಸ್ಥಾಪಿಸಿದೆ. ವಿಜ್ಞಾನ ವಿಷಯದ ಶಿಕ್ಷಣ ಹಾಗೂ
ಸಂಶೋಧನೆಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ
ಗುರುತಿಸಿಕೊಂಡಿರುವ ಈ ಸಂಸ್ಥೆಗಳ ಪ್ರವೇಶಕ್ಕೆ ಈ
ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ವಿಜ್ಞಾನದಲ್ಲಿ ಸಂಶೋಧನೆಯ ಮೂಲಕ ಸಾಮಾಜಿಕ
ಸಮಸ್ಯೆಗಳಿಗೆ ಸುಸ್ಥಿರ ಪರಿಹಾರಗಳನ್ನು ಆವಿಷ್ಕರಿಸುವ
ಮತ್ತು ಅನುಷ್ಠಾನಗೊಳಿಸುವ ಮೂಲಕ ರಾಷ್ಟ್ರವನ್ನು
ರೂಪಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವುದು
ಐಐಎಸ್‌ಇಆರ್‌ನ ಒಂದು ಪ್ರಮುಖ ಗುರಿಯಾಗಿದೆ.
ಅಲ್ಪಾವಧಿಯಲ್ಲಿಯೇ ಐಐಎಸ್‌ಇಆರ್‌ನ ಹಲವು
ಸಂಶೋಧನೆಗಳು ಪ್ರಕಟಗೊಂಡಿದ್ದು, ಪೇಟೆಂಟ್‌ಗಳ
ರೂಪದಲ್ಲಿ ಬೌದ್ಧಿಕ ಆಸ್ತಿಯನ್ನು ಸೃಷ್ಟಿಸಿವೆ.