ಮಂಗಳೂರು:ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಭಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ್ ಅಖಿಲ ಭಾರತ ಮಟ್ಟದಲ್ಲಿ 17ನೇ ಹಾಗೂ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಒಟ್ಟು 720 ಅಂಕಗಳಲ್ಲಿ 670 ಅಂಕವನ್ನು ನಿಖಿಲ್ ಪಡೆದು ಈ ಸಾಧನೆ ಮಾಡಿದ್ದಾರೆ.ಇದೇ ರೀತಿ ಕಾಲೇಜಿನ 7 ವಿದ್ಯಾರ್ಥಿಗಳು 625 ಕ್ಕಿಂತ ಅಧಿಕ ಅಂಕವನ್ನು ಪಡೆದರೆ, 19 ವಿದ್ಯಾರ್ಥಿಗಳು 600 ಕ್ಕಿಂತ ಅಧಿಕ ಅಂಕ, 57 ವಿದ್ಯಾರ್ಥಿಗಳು 575ಕ್ಕಿಂತ ಅಧಿಕ ಅಂಕ, 81 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ ಅಂಕ, 146 ವಿದ್ಯಾರ್ಥಿಗಳು 525ಕ್ಕಿಂತ ಅಧಿಕ ಅಂಕ, 233 ವಿದ್ಯಾರ್ಥಿಗಳು 500 ಕ್ಕಿಂತ ಅಧಿಕ ಅಂಕ, 324 ವಿದ್ಯಾರ್ಥಿಗಳು 475ಕ್ಕಿಂತ ಅಧಿಕ ಅಂಕ, 440 ವಿದ್ಯಾರ್ಥಿಗಳು 450ಕ್ಕಿಂತ ಅಧಿಕ ಅಂಕ, 567 ವಿದ್ಯಾರ್ಥಿಗಳು 425 ಕ್ಕಿಂತ ಅಧಿಕ ಅಂಕ, 684 ವಿದ್ಯಾರ್ಥಿಗಳು 400ಕ್ಕಿಂತ ಅಧಿಕ ಅಂಕ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
648 ಅಂಕ ಪಡೆದ ನಿಧಿ ಕೆ.ಜಿ. ಅಖಿಲ ಭಾರತ ಮಟ್ಟದ ಜನರಲ್ ಮೆರಿಟ್ನಲ್ಲಿ 84 ನೇ ರ್ಯಾಂಕ್ ಪಡೆದರೆ, 636 ಅಂಕ ಪಡೆದ ಸಾಯಿಶ್ ಶ್ರವಣ ಪಂಡಿತ್ 159ನೇ ರ್ಯಾಂಕ್, 632 ಅಂಕ ಪಡೆದ ಶ್ರೇಯಸ್ ಮಲ್ಲಪ್ಪ ಮಹಾಲಿಂಗಪುರ 214ನೇ ರ್ಯಾಂಕ್, 631 ಅಂಕ ಪಡೆದ ಸುಚಿತ್ ಪಿ. ಪ್ರಸಾದ್ 226ನೇ ರ್ಯಾಂಕ್, 630 ಅಂಕ ಪಡೆದ ವರುಣ್ ಸಿದ್ದಪ್ಪಗೌಡರ್ 241ನೇ ರ್ಯಾಂಕ್, 626 ಅಂಕ ಪಡೆದ ಸಿದ್ದೇಶ್ ಬಿ. ಡಮ್ಮಳ್ಳಿ 317ನೇ ರ್ಯಾಂಕ್, 623 ಅಂಕ ಪಡೆದ ಪೂಜಾ 386ನೇ ರ್ಯಾಂಕ್, 620 ಅಂಕ ಪಡೆದ ವಚನ ಎಲ್. ಎ. 455 ನೇ ರ್ಯಾಂಕ್, 619 ಅಂಕ ಪಡೆದ ಮನೀಶ್ ಎಲ್. 486ನೇ ರ್ಯಾಂಕ್, 617 ಅಂಕ ಪಡೆದ ಚರಣ್ ಗೌಡ ಎಂ. 548ನೇ ರ್ಯಾಂಕ್, 617ಅಂಕ ಪಡೆದ ಕೆ.ಹನನ್ ಅಬ್ದುಲ್ ರೆಹಮಾನ್ 543ನೇ ರ್ಯಾಂಕ್, 611 ಅಂಕ ಪಡೆದ ಎನ್.ಬಿ. ಸಾನಿಕಾ 771ನೇ ರ್ಯಾಂಕ್, 607 ಅಂಕ ಪಡೆದ ಮನ್ವಿತ್ ವಿಶಾಲ್ ಎಸ್.ಆರ್. 937ನೇ ರ್ಯಾಂಕ್, 606 ಅಂಕ ಪಡೆದ ವಚನಾ ಅಲ್ಲಮಪ್ರಭು ಬಾಗೋಡಿ 994 ನೇ ರ್ಯಾಂಕ್, 603 ಅಂಕ ಪಡೆದ ತುಷಾರ್ ಆರ್.ಭಟ್ 1175 ನೇ ರ್ಯಾಂಕ್, 601 ಅಂಕ ಪಡೆದ ಚೈತನ್ಯ ಟಿ. ಪಾಟೀಲ್ 1298 ನೇ ರ್ಯಾಂಕ್, 601 ಅಂಕ ಪಡೆದ ಸಾಯಿ ಲಕ್ಷ್ಮೀನಾರಾಯಣ 1316 ನೇ ರ್ಯಾಂಕ್, 601 ಅಂಕ ಪಡೆದ ಯೋಗಿತ್ ಗೌಡ ಎಚ್.ವಿ. 1320 ನೇ ರ್ಯಾಂಕ್, 599 ಅಂಕ ಪಡೆದ ಯಶಸ್ ಗೌಡ ಎಚ್.ಪಿ. 1481 ನೇ ರ್ಯಾಂಕ್, 598 ಅಂಕ ಪಡೆದ ನಿನಾದ ಕೃಷ್ಣ ಲಷ್ಕರಿ 1494 ನೇ ರ್ಯಾಂಕ್, 597 ಅಂಕ ಪಡೆದ ಲಕ್ಷ್ಯ ಎಲ್. ಪೂಜಾರ್ 1554ನೇ ರ್ಯಾಂಕ್, 594 ಅಂಕ ಪಡೆದ ಶಿವನಗೌಡ ಎಸ್. ಪಾಟೀಲ್ 1802 ನೇ ರ್ಯಾಂಕ್, 593 ಅಂಕ ಪಡೆದ ಪ್ರಜ್ವಲ್ ಎನ್.ಆರ್. 1929 ನೇ ರ್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ನೀಟ್ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 56ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದರೆ, ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಶೇ. 99ರಷ್ಟು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಇದು ಶಿಕ್ಷಣ ಸಂಸ್ಥೆಯ ಗುಣಮಟ್ಟಕ್ಕೆ ಕೈಗನ್ನಡಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.












