ವಿಹಿಂಪ ವಿಶ್ವಸ್ಥ ಮಂಡಳಿ: ಪ್ರಬಂಧ ಸಮಿತಿಯ ಸಂಯುಕ್ತ ಬೈಠಕ್ ಗೆ ಚಾಲನೆ

ಮಂಗಳೂರು: ಮಂಗಳೂರಿನ ಸಂಘನಿಕೇತದಲ್ಲಿ ನಡೆಯುವ ವಿಶ್ವ ಹಿಂದೂ ಪರಿಷತ್ ನ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಪ್ರಬಂಧ ಸಮಿತಿಯ ಸಂಯುಕ್ತ ಬೈಠಕನ್ನು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀಥ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೋಕ್ಜೆ ಪ್ರಧಾನ ಭಾಷಣ ಮಾಡಿದರು‌‌.
ಐದು ದಿನಗಳ ಕಾಲ ನಡೆಯಲಿರುವ ‌ಈ ಅಂತಾರಾಷ್ಟ್ರೀಯ ಬೈಠಕ್ ನಲ್ಲಿ ದೇಶ ವಿದೇಶಗಳ ಸುಮಾರು 350ಕ್ಕೂ ಅಧಿಕ‌ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಬೈಠಕ್ ನಲ್ಲಿ‌ ಪ್ರಧಾನವಾಗಿ ಗೋಸಂರಕ್ಷಣೆ, ಮತಾಂತರ, ರಾಮ ಮಂದಿರ ನಿರ್ಮಾಣ , ಸಿಎಎ-ಎನ್ಆರ್ ಸಿ ಬಗ್ಗೆ ಚರ್ಚೆ ನಡೆಯಲಿದೆ.