ಮಂಗಳೂರು: ನಕಲಿ ಎನ್ ಸಿ ಐ ಬಿ ತನಿಖಾಧಿಕಾರಿಗಳ ಬಂಧನ

ಮಂಗಳೂರು: ಎಂಎಲ್ ಸಿ ಸಿ.ಆರ್. ಮನೋಹರ್ ರ ವಿಧಾನಸೌಧ  ವಾಹನ ಪಾಸನ್ನು ದುರುಪಯೋಗಪಡಿಸಿದ ನಕಲಿ ಎನ್ ಸಿ ಐ ಬಿ ತನಿಖಾಧಿಕಾರಿಗಳನ್ನು ಮಂಗಳೂರಲ್ಲಿ ಬಂಧಿಸಲಾಗಿದೆ.
ಬಂಧಿತರನ್ನು ಬೆಂಗಳೂರಿನ ನಾಗರಬಾವಿ ನಿವಾಸಿಗಳಾದ ನಾಗರಾಜ ಎನ್. ಎಸ್. ಹಾಗೂ ರಾಘವೇಂದ್ರ ಎಂದು ಗುರುತಿಸಲಾಗಿದೆ.
ಕಳೆದ ಆ. 16 ರಂದು ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಬಂಧಿತನಾಗಿದ್ದ ಪ್ರಮುಖ ಆರೋಪಿ ಸ್ಯಾಮ್ ಪೀಟರ್ ಜೊತೆ ಇವರಿಬ್ಬರು ವ್ಯವಹರಿಸುತ್ತಿದ್ದರು.
ಜೊತೆಗೆ ಎನ್ ಸಿ ಐ ಬಿ ತನಿಖಾಧಿಕಾರಿಗಳೆಂದು ಪೋಸ್ ಕೊಟ್ಟು ಜನರಿಗೆ ವಂಚಿಸುತ್ತಿದ್ದರು. ಆರೋಪಿತರಿಂದ ಎನ್ ಸಿ ಐ ಬಿ ಬಾವುಟ, ಬೋರ್ಡ್,  ಎಂಎಲ್ಸಿ ಪಾಸ್ ಇರುವ ಸ್ಕಾರ್ಪಿಯೋ ಕಾರು ಮತ್ತು ಐಡಿ ಕಾರ್ಡ್ ಗಳನ್ನು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು  ವಶಪಡಿಸಿಕೊಳ್ಳಲಾಗಿದೆ. ಎಂಎಲ್ಸಿ ಸಿ ಆರ್ ಮನೋಹರ್ ರ ವಿಧಾನ ಸೌಧದ ವಾಹನ ಪಾಸನ್ನು ಈ ಇಬ್ಬರು ಆರೋಪಿಗಳು ದುರುಪಯೋಗಪಡಿಸಿದ್ದು, ಈ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.