ಮಂಗಳೂರು: ಕೊರೊನಾ ‌ಮಹಾಮಾರಿಗೆ ಎರಡನೇ ಬಲಿ

ಮಂಗಳೂರು: ಕೊರೊನಾ ‌ಮಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ನೀಡಿದ್ದು,  ಕೊರೋನಾದಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯ ಅತ್ತೆಯೂ ಬಲಿಯಾಗಿದ್ದಾರೆ.
ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ಅತ್ತೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.
ಅಲ್ಲದೇ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು.
ಆದರೆ ಸಂಜೆಯ ವೇಳೆಗೆ ಅವರು ಕೊವೀಡ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.
ಇವರ ಸೊಸೆ ಎಪ್ರಿಲ್ 19 ರಂದು ಕೊರೋನಾದಿಂದ ಮೃತಪಟ್ಟಿದ್ದರು.