ಲಯನ್ ಹರಿಪ್ರಸಾದ್ ರೈ “ಲಯನ್ ಆಫ್ ದ ಇಯರ್”

ಉಡುಪಿ: ಫೆ 25 ರಂದು ಬ್ರಹ್ಮಗಿರಿ ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾಧ್ಯಕ್ಷರ ಭೇಟಿ ಕಾರ್ಯಕ್ರಮವು ಉದ್ಯಾವರ ಬಲಾಯಿಪಾದೆ ನಿತ್ಯಾನಂದ ಆರ್ಕೆಡ್ ನಲ್ಲಿ ನಡೆಯಿತು. ಮಾಜಿ ಜಿಲ್ಲಾ ಗವರ್ನರ್ ಗಳ ಮಾಸಿಕದಂದು ಆರು ಮಂದಿ ಮಾಜಿ ಜಿಲ್ಲಾ ಗವರ್ನರ್ ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರಾಂತೀಯ ಅಧ್ಯಕ್ಷ ಲಯನ್ ಹರಿಪ್ರಸಾದ್ ರೈ ಅವರನ್ನು “ಲಯನ್ ಆಫ್ ದ ಇಯರ್” ಎಂದು ಕ್ಲಬ್ಬಿನ ಅಧ್ಯಕ್ಷ ಲಯನ್. ಉಮೇಶ್ ನಾಯಕ್ ಘೋಷಿಸಿ, ಪ್ರಾಂತೀಯ ಅಧ್ಯಕ್ಷರ ಜೊತೆಯಲ್ಲಿ ಪ್ರಾಂತೀಯ ಪ್ರಥಮ ಮಹಿಳೆ ಲಯನ್ ವಿಜೇತ ರೈ, ಅವರನ್ನು ಸನ್ಮಾನಿಸಲಾಯಿತು.

ಕ್ಲಬ್ ನ ಅಧ್ಯಕ್ಷ ಲಯನ್ ಉಮೇಶ್ ನಾಯಕ್, ಕಾರ್ಯದರ್ಶಿ ಲಯನ್ ಗೀತಾ.ವಿ.ರಾವ್, ಪ್ರಾಂತೀಯ ಕಾರ್ಯದರ್ಶಿ ಲಯನ್ ಗಿರೀಶ್ ರಾವ್, ಲಿಯೋ ಕಾರ್ಯದರ್ಶಿ ಶ್ರೇಯನ್ ಶೇಟ್, ವಲಯ ಅಧ್ಯಕ್ಷ ಲಯನ್ ಜಯಾನಂದ ಕೊಡವೂರು ಮತ್ತು ಮಾಜಿ ಜಿಲ್ಲಾ ಗವರ್ನರ್ ಗಳಾದ ಲಯನ್ ಜಯಕರ್ ಶೆಟ್ಟಿ ಇಂದ್ರಾಳಿ, ಲಯನ್ ಸುರೇಶ್ ಶೆಟ್ಟಿ, ಲಯನ್ ಮಧುಸೂದನ್ ಹೆಗಡೆ, ಲಯನ್ ವಿ.ಜಿ.ಶೆಟ್ಟಿ, ಲಯನ್ ಎನ್ .ಎಮ್.ಹೆಗಡೆ, ಲಯನ್ ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.

ಲಯನ್ ಇಂದಿರಾ ಸುಬ್ಬಯ್ಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಲಯನ್ ಉಮೇಶ್ ನಾಯಕ್ ಸ್ವಾಗತಿಸಿದರು, ಲಯನ್ ಗೀತಾ ವಿ ರಾವ್ ವಂದಿಸಿದರು.