ಕುಂದಾಪುರ: “ಸತ್ತ್ವಾತ್ ಸಂಜಾಯತೆ ಜ್ಞಾನಂ”ಅಂತಯ೯ ಶಕ್ತಿಯನ್ನು ಉದ್ದೀಪನಗೊಳಿಸುವುದೇ ನಿಜವಾದ ನಿಜವಾದ ಶಿಕ್ಷಣ.ಇಂತಹ ಪರಿಪೂರ್ಣವಾದ ಶಿಕ್ಷಣ ಕೇವಲ ತರಗತಿಯ ನಾಲ್ಕು ಗೇೂಡೆಗಳೊಳಗೆ ಪಡೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ವಾಸ್ತವಿಕ ಪ್ರಪಂಚದ ಅರಿವು ಮುಾಡಿಸುವಲ್ಲಿ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಸಕ್ರಿಯವಾಗಿ ಭಾಗಿಸುವಂತೆ ಪ್ರೇರಣೆ ನೀಡಬೇಕಾದ ಜವಾಬ್ದಾರಿ ಶಿಕ್ಷಕರಿಗೂ ಹೆತ್ತವರಿಗೂ ಇದೆ.
ಅನುಭವ ಕಲಿಕಾ ಪದ್ದತಿಯನ್ನು ಪದವಿಹಂತದಲ್ಲಿ ವಿದ್ಯಾರ್ಥಿಗಳಿಗೆ ಅಳವಡಿಕೆ ಇಂದಿನ ಅಗತ್ಯತೆಯೂ ಹೌದು.ಈ ನಿಟ್ಟಿನಲ್ಲಿ ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜು ಮುಂಚೂಣಿಯಲ್ಲಿರುವ ವಿದ್ಯಾ ಸಂಸ್ಥೆ” ಎಂದು ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿಯವರು ನಿವೃತ್ತ ಮುಖ್ಯಸ್ಥ ರಾಜ್ಯ ಶಾಸ್ತ್ರ ವಿಭಾಗ ಎಂಜಿಎಂ.ಕಾಲೇಜು ಇವರು ಅಭಿಪ್ರಾಯಿಸಿದರು.

ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದಜೆ೯ ಕಾಲೇಜಿನಲ್ಲಿ ಪ್ರಥಮ ವರುಷದ ಪದವಿ ತರಗತಿಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ದಿಕ್ಸೂಚಿ ಉಪನ್ಯಾಸ ನೀಡಿದರು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಉಮೇಶ್ ಶೆಟ್ಟಿ ವಹಿಸಿದ್ದರು.ಉಪ ಪ್ರಾಂಶುಪಾಲ ಡಾ.ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ರಕ್ಷಿತ್ ರಾವ್ ಆಡಳಿತ ವಿಭಾಗದ ಡೀನ್ ಪ್ರಾಸ್ತಾವಿಕವಾಗಿ ಮಾತನಾಡಿದರುಗಣಕ ವಿಭಾಗದ ಹಿರಿಯ ಉಪನ್ಯಾಸಕ ಗಿರಿರಾಜ್ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ಸತೀಶ್ ಶೆಟ್ಟಿ ಅತಿಥಿ ಪರಿಚಯ ನೀಡಿದರು. ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೇೂಜಕಿ ದೀಪಿಕಾ.ಜಿ. ವಂದಿಸಿದರು.ರೇಷ್ಮಾ ಶೆಟ್ಟಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು.












