ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ: ಜೂ.1 ರಂದು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕುಂದಾಪುರ: ಕುಲಾಲ ಸಮಾಜ ಸುಧಾರಕರ ಸಂಘ (ರಿ) ಕುಂದಾಪುರ, ಕುಲಾಲ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಕುಲಾಲ ಸಮುದಾಯದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ದಿನಾಂಕ 01-06-2025 ಸಮಯ ಬೆಳಗ್ಗೆ 10.00 ಗಂಟೆಗೆ ಕುಲಾಲ ಸಮುದಾಯ ಭವನ ಹೊಂಬಾಡಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಗೌರವ ಅಧ್ಯಕ್ಷತೆಯನ್ನು ಕುಲಾಲ ರತ್ನ ಡಾ|ಎಂ.ವಿ.ಕುಲಾಲ್ ವೈದ್ಯಕೀಯ ನಿರ್ದೇಶಕರು ಮಂಜುನಾಥ ಆಸ್ಪತ್ರೆ ಕುಂದಾಪುರ ಗೌರವ ಅಧ್ಯಕ್ಷರು ಕುಲಾಲ ಸಮಾಜ ಸುಧಾರಕ ಸಂಘ (ರಿ) ಕುಂದಾಪುರ ಹಾಗೂ ಅಧ್ಯಕ್ಷತೆಯನ್ನು ರಾಘವೇಂದ್ರ ಕುಲಾಲ ಹೆಮ್ಮಾಡಿ , ಅಧ್ಯಕ್ಷರು, ಕುಲಾಲ ಸಮಾಜ ಸುಧಾರಕ ಸಂಘ (ರಿ) ಕುಂದಾಪುರ, ಇವರು ವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ, ಗಣೇಶ್ ಮೋಗವೀರ – ಅಧ್ಯಕ್ಷರು & ಪ್ರಾಂಶುಪಾಲರು ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇವರು ಇರಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ| ಎಮ್ ಅಣ್ಣಯ್ಯ ಕುಲಾಲ ಉಳ್ತೂರು, ಪ್ರವರ್ತಕರು. ಪುಟ್ಟಣ್ಣ ಕುಲಾಲ ಪ್ರತಿಷ್ಠಾನ (ರಿ), ಮಂಗಳೂರು, ಕೆ.ಎ. ಲಕ್ಷ್ಮಣ್ ಕುಲಾಲ್ ಜನ್ಸಾಲೆ ಆಡಳಿತ ಧರ್ಮದರ್ಶಿಗಳು. ಶ್ರೀ ಸರ್ವಾರ್ಥ ಸಾಧಿಕೆ ಅಮ್ಮನವರ ದೇವಸ್ಥಾನ ಶಕ್ತಿ ಸ್ಥಳ ಜನ್ಸಾಲೆ, ಶ್ರೀ ಗಂಗಾಧರ್ ಬಂಜನ್ ರಾಜ್ಯಾಧ್ಯಕ್ಷರು – ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ, ದಿವಾಕರ್ ಬಂಗೇ‌ರ್ ಉಡುಪಿ ಜಿಲ್ಲಾಧ್ಯಕ್ಷರು ಕ.ರಾ.ಕು.ಕು.ಯು.ವೇದಿಕೆ, ವಿಶ್ವನಾಥ ಕುಲಾಲ್ ಬಿದ್ಕಲ್ ಕಟ್ಟೆ
ನಿಕಟ ಪೂರ್ವ ಅಧ್ಯಕ್ಷರು ಕುಲಾಲ ಸಮಾಜ ಸುಧಾರಕ ಸಂಘ (ರಿ) ಕುಂದಾಪುರ, ಪ್ರಭಾಕರ್ ಕುಲಾಲ್ ಜನ್ಸಾಲೆ, ವಲಯ ಅರಣ್ಯಾಧಿಕಾರಿಗಳು, ಕಾರ್ಕಳ, ಸುರೇಶ್ ಕುಲಾಲ್ ವಕ್ವಾಡಿ , ಉದ್ಯಮಿಗಳು, ಶ್ರೀಮತಿ ಪ್ರತಿಮಾ ವಿನೋದ್ ಕುಮಾರ್ ಗೌರವಾಧ್ಯಕ್ಷರು ಮಹಿಳಾ ಘಟಕ ಕ.ಸ.ಸು.ಸಂ (ರಿ) ಕುಂದಾಪುರ, ಹರಿಶ್ಚಂದ್ರ ಕುಲಾಲ, ಅಧ್ಯಕ್ಷರು, ಕುಲಾಲ ಸಮಾಜ ಸುಧಾರಕ ಸಂಘ (ರಿ) ಕಾರ್ಕಳ, ಕಾಳು ಕುಲಾಲ ಅಧ್ಯಕ್ಷರು – ಕುಲಾಲ ಸಂಘ (ರಿ) ಪೆರ್ಡೂರು, ವಿಜಯ ಕುಲಾಲ್ ಅಧ್ಯಕ್ಷರು – ಕುಲಾಲ ಸಮಾಜ ಸೇವಾ ಸಂಘ (ರಿ) ಬ್ರಹ್ಮಾವರ, ಕೃಷ್ಣ ಕುಲಾಲ ನಡೂರು ಅಧ್ಯಕ್ಷರು, ಮೆಕ್ಕೆಕಟ್ಟು ಕುಲಾಲ ಸಂಘ (ರಿ) ಮೆಕ್ಕೆಕಟ್ಟು, ಸುರೇಂದ್ರ ಕುಲಾಲ ವರಂಗ ಅಧ್ಯಕ್ಷರು, ಕುಲಾಲ ಸಂಘ (ರಿ) ಹೆಬ್ರಿ, ರಮೇಶ್ ಕುಲಾಲ ಕಾವ್ರಡಿ, ಕಛೇರಿ ಅಧೀಕ್ಷಕರು – ಸಮಾಜ ಕಲ್ಯಾಣ ಇಲಾಖೆ ಕುಂದಾಪುರ, ಶ್ರೀಮತಿ ಅನಿತಾ ಅಶೋಕ್ ಕುಲಾಲ ಅಧ್ಯಕ್ಷರು ಮಹಿಳಾ ಘಟಕ ಕ.ಸ.ಸು.ಸಂ(ರಿ) ಕುಂದಾಪುರ, ಸುರೇಶ್ ಕುಲಾಲ ಆಜ್ರಿ, ಕಾರ್ಯದರ್ಶಿ ಕುಲಾಲ ಸಮಾಜ ಸುಧಾರಕ ಸಂಘ (ರಿ) ಕುಂದಾಪುರ, ಮಂಜುನಾಥ ಕುಲಾಲ ಜನ್ಸಾಲೆ, ನಿಯೋಜಿತ ಜಿಲ್ಲಾಧ್ಯಕ್ಷರು ಕ.ರಾ.ಕು.ಕು.ಯು.ವೇದಿಕೆ, ಶಂಕರ ಕುಲಾಲ ಮೊಳಹಳ್ಳಿ , ನಿಯೋಜಿತ ಜಿಲ್ಲಾ ಪ್ರ.ಕಾರ್ಯದರ್ಶಿ ಕ.ರಾ.ಕು.ಕು.ಯು.ವೇದಿಕೆ ಇವರುಗಳು ಆಗಮಿಸಲಿದ್ದಾರೆ.