ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇಗುಲದಲ್ಲಿ ಇಂದು ಶಂಕರನಾರಾಯಣ ದೇವರಿಗೆ ಸಾನಿಧ್ಯ ಕಲಶಾಭಿಷೇಕ ನೆರವೇರಿಸಲಾಯಿತು.

ಪುತ್ತೂರು ಹಯವದನ ತಂತ್ರಿಗಳ ನೇತ್ರತ್ವದಲ್ಲಿ ಋತ್ವಿಜರಾದ ಪಂಜ ಭಾಸ್ಕರ ಭಟ್, ಮಧುಸೂದನ ಭಟ್, ಪಾಡಿಗಾರು ಶ್ರೀನಿವಾಸ ತಂತ್ರಿ, ವಾದಿರಾಜ ತಂತ್ರಿ ಅವರ ಸಹಕಾರದೊಂದಿಗೆ ಧಾರ್ಮಿಕ ವಿಧಿವಿಧಾನಗಳು ನಡೆಯಿತು.


ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸದಸ್ಯರಾದ ಜನಾರ್ದನ್ ಕೊಡವೂರು, ರಾಜ ಎ ಶೇರಿಗಾರ್, ಭಾಸ್ಕರ ಬಾಚನಬೈಲು, ಸುಧಾ ಎನ್ ಶೆಟ್ಟಿ, ಬಾಬ ,ಲಕ್ಷ್ಮೀನಾರಾಯಣ ಭಟ್ , ಶ್ಯಾಮ ಸುಂದರ ಭಟ್, ಉಮೇಶ್ ರಾವ್, ಸಂಧ್ಯಾ ಪ್ರಕಾಶ್, ಪೂರ್ಣಿಮಾ ಜನಾರ್ದನ್, ವಿಜಯಶ್ರೀ, ಸತೀಶ್ ಕೊಡವೂರ್, ಬಾಲಕೃಷ್ಣ, ಕಾಂತಪ್ಪ ಕರ್ಕೇರ, ಶಿವಪ್ಪ ಟಿ ಕಾಂಚನ್, ಹಿರಿಯಣ್ಣ, ಹರೀಶ್ ಕೋಟ್ಯಾನ್, ರಂಜಿತ್ ಕೊಡವೂರು, ಅರುಣ್ ಕುಮಾರ್, ಪ್ರವೀಣ್ ಕೊಡವೂರ್ ಮತ್ತಿತರರು ಉಪಸ್ಥಿತರಿದ್ದರು.



















