ಆರ್ಥಿಕ ಸಂಕಷ್ಟಕ್ಕೀಡಾಗಿರುವ ಸಾರಸ್ವತ ಸಮಾಜ ಬಾಂಧವರಿಗೆ ನೆರವು

ಉಡುಪಿ: ಕೊರೋನಾ ಕಾರಣದಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಇರುವ ಹಿನ್ನೆಲೆಯಲ್ಲಿ , ಯಾವುದೇ ಆದಾಯವಿಲ್ಲದೆ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಸಾರಸ್ವತ ಸಮಾಜ ಬಾಂಧವರ ನೆರವಿಗಾಗಿ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ (ರಿ.) ಬಂಟಕಲ್ಲು, ಮಣಿಪಾಲ, ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ  ಮಣಿಪಾಲ ಮತ್ತು ಶ್ರೀ ದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಪರ್ಕಳ ಇವರ ಸಹಭಾಗಿತ್ವದಲ್ಲಿ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

ಸುಮಾರು ಒಂದು ನೂರಕ್ಕೂ ಅಧಿಕ ಕುಟುಂಬಗಳನ್ನು ಆಯ್ಕೆ ಮಾಡಲಾಗಿದ್ದು, ಶನಿವಾರ ಕರ್ಜೆ ಮತ್ತು ಕುಕ್ಕೆಹಳ್ಳಿ ಪರಿಸರದ 19 ಫಲಾನುಭವಿಗಳಿಗೆ ಕಿಟ್ ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀ ದುರ್ಗಾ ಪರಮೇಶ್ವರಿ ಸೊಸೈಟಿಯ ಅಧ್ಯಕ್ಷ ಅಶೋಕ್ ಕಾಮತ್, ಕೊಡಂಗೆ ಮತ್ತು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ನಿತ್ಯಾನಂದ ನಾಯಕ್, ನರಸಿಂಗೆ, ಆರ್ ಎಸ್ ಬಿ ಮಹಿಳಾ ವೇದಿಕೆಯ ಕಾರ್ಯದರ್ಶಿ ವಿದ್ಯಾ ವಿ. ನಾಯಕ್ ಹಾಗೂ ಆರ್ ಎಸ್ ಬಿ ಸಂಘ ಮಣಿಪಾಲ ಇದರ ಕಾರ್ಯದರ್ಶಿ ಸುಮಿತ್ರಾ ಎಚ್ ನಾಯಕ್ ದೇವಿನಗರ  ಉಪಸ್ಥಿತರಿದ್ದರು.
ಆರ್ ಎಸ್ ಬಿ ಸಂಘ ಮಣಿಪಾಲ ಇದರ ಅಧ್ಯಕ್ಷ ಎಂ ಗೋಕುಲ್ ದಾಸ್ ನಾಯಕ್ ಹಾಗೂ ಮಹಿಳಾ ವೇದಿಕೆಯ ಅಧ್ಯಕ್ಷೆ  ಮೋಹಿನಿ ಎನ್ ನಾಯಕ್  ಮಾರ್ಗದರ್ಶನದಲ್ಲಿ ನಡೆಯುವ ಈ ಸಮಾಜ ಸೇವಾ ಕಾರ್ಯಕ್ರಮವು ಮುಂದುವರೆಯಲಿದೆ.