ಕಿದಿಯೂರು ಹೋಟೆಲ್ ಕಾರಣಿಕ ನಾಗ ಸನ್ನಿಧಿಯಲ್ಲಿ ಬ್ರಹ್ಮಕುಂಬಾಭಿಷೇಕ, ರಜತ ಕವಚ ಸಮರ್ಪಣೆ

ಉಡುಪಿ: ಕಿದಿಯೂರು ಹೋಟೆಲ್ ಕಾರಣಿಕ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಅಂಗವಾಗಿ ನಾಗದೇವರಿಗೆ ವಿಶೇಷ ಅಲಂಕಾರವು ವೇ. ಮೂ. ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಾಗ ದೇವರಿಗೆ ನೂತನವಾಗಿ ನಿರ್ಮಿಸಿದ ಭವ್ಯ ರಜತ ಮಂಟಪ, ರಜತ ಕವಚ ಮತ್ತು ಸ್ವರ್ಣ ಲೇಪಿತ ರಜತ ಪ್ರಭಾವಳಿ, ರಜತ ಬಲಿ ಮೂರ್ತಿಯನ್ನು ಸಮರ್ಪಿಸಲಾಯಿತು.

ಬುಧವಾರ ಮೀನ ಲಗ್ನದ ಸುಮೂರ್ತಹದಲ್ಲಿ ಅಷ್ಟೋತ್ತರ ಶತ ಕಲಶಾಭಿಷೇಕದ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಬ್ರಹ್ಮಕುಂಬಾಭಿಷೇಕ, ಪ್ರಸನ್ನ ಪೂಜೆ ನಡೆಯಿತು.

ನಾಗ ದೇವರ ವೀಕ್ಷೆಣೆಗೆ ಬಂದ ಎಲ್ಲಾ ಸಾರ್ವಜನಿಕ ಭಕ್ತಾದಿಗಳಿಗೆ ಕಾಶಿಯಿಂದ ತಂದ ಪವಿತ್ರ ಗಂಗಾಜಲ ಸಂಪ್ರೋಕ್ಷಣೆ ಹಾಗು ನಾಗರಕ್ಷಾ ದಾರವನ್ನು ಪ್ರಸಾದದೊಂದಿಗೆ ವಿತರಿಸಲಾಯಿತು.


ಸೇವಾಕರ್ತ ಭುವನೇಂದ್ರ ಕಿದಿಯೂರು, ಶ್ರೀಮತಿ ಹೀರಾ ಬಿ. ಕಿದಿಯೂರು, ಆಯೋಜಕ ಯುವರಾಜ್ ಮಸ್ಕತ್, ಶ್ರೀಮತಿ ಯುವರಾಜ್ ಸಾಲಿಯನ್ , ನಾಡೋಜ ಡಾ. ಜಿ. ಶಂಕರ್ , ಬ್ರಿಜೇಶ್ ಬಿ. ಕಿದಿಯೂರು , ಡಾ. ಭವ್ಯಶ್ರೀ ಕಿದಿಯೂರು, ಡಾ ಅಭಿನ್ ದೇವದಾಸ್ ಶ್ರೀಯಾನ್ , ಡಾ. ವಿಜಯೇಂದ್ರ, ಗಣೇಶ ರಾವ್, ಹಿರಿಯಣ್ಣ ಕಿದಿಯೂರು, ಜೀತೇಶ ಬಿ. ಕಿದಿಯೂರು, ಹರಿಯಪ್ಪ ಕೋಟ್ಯಾನ್ , ರಮೇಶ ಕಿದಿಯೂರು, ಪ್ರಿಯಾಂಕಾ ಕಿದಿಯೂರು, ಶಿಲ್ಪಾ ಯಾಜ್ಞೆಶ್ ಕಿದಿಯೂರು ಹಾಗೂ ಕುಟುಂಬದ ಸದಸ್ಯರು ಅರ್ಚಕ ವೃಂದ ಮತ್ತು ಸಾವಿರಾರು ಭಕ್ತರು ಉಪಸ್ಥಿರಿದ್ದರು.