ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಇಎ-ಸಿಇಟಿ ಪ್ರವೇಶ ಮಾಹಿತಿ ಕಾರ್ಯಕ್ರಮ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ
ಮಹಾವಿದ್ಯಾಲಯದ ವತಿಯಿಂದ ಜೂನ್ 22, 2025 ರಂದು ಸಿಇಟಿ ಮೂಲಕ ಪ್ರವೇಶ ಬಯಸುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಕೆಇಎ – ಸಿಇಟಿ ಪ್ರವೇಶ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಡಾ. ತಿರುಮಲೇಶ್ವರ ಭಟ್
ಅವರು ಸಿಇಟಿ ಪ್ರವೇಶ ಪ್ರಕ್ರಿಯೆಯ ವಿವಿಧ ಹಂತಗಳು, ಆಯ್ಕೆ
ನಮೂದಿಸುವ ಕ್ರಮ, ಅಣಕು ಸೀಟು ಹಂಚಿಕೆ, ವಿವಿಧ ಸುತ್ತುಗಳಲ್ಲಿ ನೀಡಬಹುದಾದ ಆಯ್ಕೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು.

ಜೊತೆಗೆ ಈ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸೀಟು ಹಂಚಿಕೆ ವಿಧಾನದಲ್ಲಿ ಆಗಿರುವ ಪ್ರಮುಖ ಬದಲಾವಣೆಗಳ ಕುರಿತು ವಿವರವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸೋದೆ ವಾದಿರಾಜ ಮಠ
ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಧಿಕಾರಿಯಾದ ಪ್ರೊ. ಡಾ. ರಾಧಾಕೃಷ್ಣ ಎಸ್ ಐತಾಳ್ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಪ್ರಸ್ತುತ ಸಂಭೋಧನೆ, ಉದ್ಯೋಗಶೀಲತೆ, ಇನ್ಕ್ಯುಬೇಶನ್ ಮತ್ತು ನಾವೀನ್ಯತೆ, ಮೌಲ್ಯಾಧಾರಿತ ಶಿಕ್ಷಣ, ಪ್ರೌಢ ಶಾಲಾ ಪೂರೈಕೆ, ಸ್ನಾತಕೋತ್ತರ ಶಿಕ್ಷಣದ ಉಪಕ್ರಮಗಳು, ಉದ್ಯೋಗಾವಕಾಶಗಳು, ಪೂರಕ ತರಬೇತಿಗಳು, ಹಳೆ
ವಿದ್ಯಾರ್ಥಿಗಳ ಸಹಕಾರ, ಉಜ್ವಲ ಕ್ಯಾಂಪಸ್ ಜೀವನ ಇತ್ಯಾದಿಗಳ ಬಗ್ಗೆ ಮಾತನಾಡಿ ಸಂಸ್ಥೆಯ ವಿಭಿನ್ನತೆಯನ್ನು ಬಿಂಬಿಸಿದರು.ಈ ಕಾರ್ಯಕ್ರಮದಲ್ಲಿ ಸುಮಾರು ೧೨೫ಕ್ಕೂ ಹೆಚ್ಚು ಸಿಇಟಿ ಆಸಕ್ತ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿದ್ದರು.