ಕಾಪು ಮಾರಿಯಮ್ಮ ನುಡಿ ಇದು ಸುಳ್ಳುಸುದ್ದಿ: ಆಡಳಿತ ಮಂಡಳಿ ಸ್ಪಷ್ಟನೆ

ಕಾಪು ಮಾ.24: ಕೊರೊನಾ ವೈರಸ್ ಬರದಂತೆ ತಡೆಯಲು ಬೆಲ್ಲದ ಕಣ್ಣ ಚಾಕ್ಕೆ ಅರಸಿನ ಹುಡಿ ಸೇರಿಸಿ ಸಂಜೆ 6 ಗಂಟೆಯೊಳಗೆ ಕುಡಿಯಿರಿ ಎಂದು ಕಾಪು ಮಾರಿಯಮ್ಮನ ನುಡಿಯಾಗಿದೆ ಎಂದು ಸಾಮಾಜಿಕ ಜಾಲತಾಣ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಸುದ್ದಿ ಎಂದು ಕಾಪು ಮಾರಿಗುಡಿಗಳ ಆಡಳಿತ ಮಂಡಳಿ ಸ್ಪಸ್ಟನೆ ನೀಡಿದೆ‌.

ಇಂದು ಕಾಪು ಮಾರಿಗುಡಿಯಲ್ಲಿ ಇಂತಹ ಯಾವುದೇ ವಿದ್ಯಾಮಾನ ನಡೆದಿಲ್ಲ, ದೇವಿಯು ಯಾವುದೇ ಅಪ್ಪಣೆ ನೀಡಿಲ್ಲ ಹಾಗೂ ಇಂದು ಮಧ್ಯಾಹ್ನ ದೇವಿಯ ದರ್ಶನ ಸೇವೆ ಕೂಟ ನಡೆದಿಲ್ಲ. ಯಾರೂ ಕೂಡ ಇದನ್ನು ನಂಬಬೇಡಿ, ಅಲ್ಲದೆ ದೇವಿಯ ಹೆಸರಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಾರ್ವಜನಿಕ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವವರ  ವಿರುದ್ದ ಪೋಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.