ಕಟಪಾಡಿ ಗ್ರಾಪಂನಿಂದ ಎರೆಹುಳು ಗೊಬ್ಬರ ಘಟಕ ಸ್ಥಾಪನೆಗೆ ಚಾಲನೆ

ಕಟಪಾಡಿ: ಕಟಪಾಡಿ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತ ಬಂಧು ಅಭಿಯಾನದಡಿ ‘ಎರೆಹುಳು ಗೊಬ್ಬರ ತೊಟ್ಟಿ ಘಟಕ’ ರಚನೆಗೆ ಚಾಲನೆ ನೀಡಲಾಯಿತು.

ನಾಗೇಶ ಕಾಮತ್ ಕಟಪಾಡಿ ಅವರ ಜಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಇಂದಿರಾ ಎಸ್. ಆಚಾರ್ಯ, ಉಪಾಧ್ಯಕ್ಷ ಎ.ಆರ್. ಅಬುಬಕ್ಕರ್, ಪಿಡಿಒ ಮಮತಾ ವೈ ಶೆಟ್ಟಿ, ಸದಸ್ಯರುಗಳಾದ ಪ್ರಭಾ ಬಿ. ಶೆಟ್ಟಿ, ಸುಗುಣ ಪೂಜಾರ್ತಿ, ವೀಣಾ ಎನ್, ಆಗ್ನೆಸ್ ಡೇಸಾ, ವಿಜಯ್ ಮಾಬಿಯನ್, ಪ್ರಭಾಕರ್ ಪಾಲನ್, ಪ್ರಸೀನ್ ಜಿ. ಪೂಜಾರಿ, ಲೆಕ್ಕ ಪರಿಶೋಧಕ ವಿಜಯ್ ಉದ್ಯಾವರ, ಗೋಕುಲ್ ದಾಸ್ ಕಾಮತ್, ಶೈಲಾ ಜಿ. ಕಾಮತ್ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.