ರಾಜ್ಯ ಸರ್ಕಾರದ ಶ್ರೀಗಂಧ ನೀತಿ-2022: ರೈತರು ಶ್ರೀಗಂಧ ಬೆಳೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ

ಬೆಂಗಳೂರು: ಶ್ರೀಗಂಧಕ್ಕೆ ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ರಾಜ್ಯ ಸರ್ಕಾರವು ಶ್ರೀಗಂಧ ನೀತಿ-2022 ಅನ್ನು ಹೊರತಂದಿದ್ದು, ಇದರಲ್ಲಿ ರೈತರು ತಮ್ಮ ಹೊಲಗಳಲ್ಲಿ ಶ್ರೀಗಂಧವನ್ನು ಬೆಳೆದು ನಂತರ ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ, ಮುಕ್ತ ಮಾರುಕಟ್ಟೆಯಲ್ಲಿ ಶ್ರೀಗಂಧ ಮಾರಾಟಕ್ಕೆ ನಿರ್ಬಂಧವಿತ್ತು .ಈ ನೀತಿ ಜಾರಿಗೆ ಬರುವುದರೊಂದಿಗೆ, ಕಳ್ಳತನ ತಡೆಯಲು ಶ್ರೀಗಂಧದ ಮರಕ್ಕೆ ರಕ್ಷಣೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದು, ತಂತ್ರಜ್ಞಾನದ ಬಳಕೆಯಿಂದ ಶ್ರೀಗಂಧದ ಮರಗಳಿಗೆ ಚಿಪ್ ಅಳವಡಿಸಿ ಕಳ್ಳತನ ನಡೆದರೆ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಭವಿಷ್ಯದಲ್ಲಿ ರೈತರು ಶ್ರೀಗಂಧವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಬಯಸಿದರೆ, ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯು ಶ್ರೀಗಂಧವನ್ನು ಖರೀದಿಸುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು, ಜೊತೆಗೆ ಖಾಸಗಿಯವರಿಗೂ ಶ್ರೀಗಂಧದ ಅಗತ್ಯವಿದೆ. ಶ್ರೀಗಂಧ ಮಾರಾಟದ ಬಗ್ಗೆ ರೈತರಿಗೆ ಪದೇ ಪದೇ ಮಾರ್ಗದರ್ಶನ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

Certified Indian Sandalwood Logs | Quintis Sandalwood

ಮೈಸೂರು ಸಾಮ್ರಾಜ್ಯದ ಆಡಳಿತಗಾರ ಟಿಪ್ಪು ಸುಲ್ತಾನನ 1792 ರ ಶಾಸನವು ಶ್ರೀಗಂಧವನ್ನು ರಾಜ ಮರವೆಂದು ಘೋಷಿಸಿತ್ತು. ಇದರಿಂದಾಗಿ ಶ್ರೀಗಂಧವನ್ನು ವಾಣಿಜ್ಯ ಉಪಯೋಗಗಳಿಗಾಗಿ ಬೆಳೆಸುವುದು ಕಷ್ಟವಾಗಿತ್ತು. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಶಾಸನವನ್ನು ಅಳವಡಿಸಿಕೊಂಡು ಶ್ರೀಗಂಧವನ್ನು ಸರ್ಕಾರದ ನಿಯಂತ್ರಣದಲ್ಲಿ ಇರಿಸಿದ್ದವು.  ಶ್ರೀಗಂಧದ ಮರದ ಕೃಷಿಯ ಮೇಲೆ ಅನೇಕ ಕಾನೂನು ಬಾಧ್ಯತೆಗಳನ್ನು ವಿಧಿಸಿದ್ದರಿಂದ ಇದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೆ ಉಂಟು ಮಾಡಿತ್ತು. ಶ್ರೀಗಂಧ ಬೆಳೆ ಮತ್ತು ಮಾರಾಟದ ಮೇಲೆ ಅನೇಕ ಕಾನೂನು ವಿಧಿಗಳನ್ನು ಹೇರಿದ್ದರಿಂದ ಜನರು ಈ ಬೆಳೆಯಿಂದ ವಿಮುಖರಾದರು. ಇದೀಗ ಸರ್ಕಾರದ ಹೊಸ ನೀತಿಯಿಂದಾಗಿ ಶ್ರೀಗಂಧ ಬೆಳೆಯಲು ಅನುಕೂಲವಾಗಲಿದೆ. ಶ್ರೀಗಂಧವನ್ನು ವಾಣಿಜ್ಯ ಬೆಳೆಯಾಗಿ ಬೆಳೆದು ಲಕ್ಷಾಂತರ ರೂಪಾಯಿ ಗಳಿಸಬಹುದು.

ಶ್ರೀಗಂಧ ಬೆಳೆಯುವುದು ಹೇಗೆ?

ಮಧ್ಯಮ ಮಳೆಯೊಂದಿಗೆ ಬಿಸಿಲಿನ ವಾತಾವರಣ ಹೊಂದಿರುವ ಪ್ರದೇಶವನ್ನು ಆರಿಸಿ. ಶ್ರೀಗಂಧದ ಮರವು ಸಾಕಷ್ಟು ಸೂರ್ಯನ ಬೆಳಕು, ಮಧ್ಯಮ ಮಳೆ ಮತ್ತು ವರ್ಷದ ಕೆಲವು ಭಾಗಗಳಲ್ಲಿ ಸಾಕಷ್ಟು ಶುಷ್ಕ ವಾತಾವರಣವಿರುವ ಸ್ಥಳಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಗಿಡವು 0°- 38° ಸೆಲ್ಸಿಯಶ್ ತಾಪಮಾನದ ಶ್ರೇಣಿಯನ್ನು ಬಯಸುತ್ತದೆ. ವಾರ್ಷಿಕ ಮಳೆಯು 500 ರಿಂದ 3000ಮಿಲಿಮೀಟರ್ ವ್ಯಾಪ್ತಿಯಲ್ಲಿರಬೇಕು. 600 ರಿಂದ 1050 ಮೀಟರ್‌ಗಳ ನಡುವಿನ ಮಧ್ಯಮ ಎತ್ತರದ ಪ್ರದೇಶಗಳು ಈ ಬೆಳೆಗೆ ಸೂಕ್ತ.

ಬೆಳೆಯುವ ವಿಧಾನ

ನೀರು ನಿಲ್ಲದೆ ಇರುವ ಮಣ್ಣನ್ನು ಆರಿಸಿ. ನೀರು ನಿಲ್ಲುವಂತಹ ಯಾವುದೇ ಮಣ್ಣನ್ನು ಶ್ರೀಗಂಧವು ಸಹಿಸುವುದಿಲ್ಲ. ನೀವು ಮರಳು ಮಣ್ಣಿನಲ್ಲಿ ನಾಟಿ ಮಾಡುತ್ತಿದ್ದರೆ, ನೀರು ಬೇಗನೆ ಬರಿದಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.

# ಶ್ರೀಗಂಧವು ಕೆಂಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
# ಶ್ರೀಗಂಧವನ್ನು ಮರಳು ಮಣ್ಣು, ಕೆಂಪು ಜೇಡಿಮಣ್ಣಿನ ಮಣ್ಣು ಮತ್ತು ವರ್ಟಿಸೋಲ್‌ಗಳಲ್ಲಿಯೂ ಸಹ ನೆಡಬಹುದು.
# ವರ್ಟಿಸೋಲ್ ಒಂದು ರೀತಿಯ ಜೇಡಿಮಣ್ಣಿನಿಂದ ಸಮೃದ್ಧವಾಗಿರುವ ಕಪ್ಪು ಮಣ್ಣು, ಇದು ಶುಷ್ಕ ವಾತಾವರಣದಲ್ಲಿ ಸಂಕುಚಿತಗೊಳ್ಳುತ್ತದೆ ಮತ್ತು ಆಳವಾದ ಮಣ್ಣಿನ ಬಿರುಕುಗಳನ್ನು ಸೃಷ್ಟಿಸುತ್ತದೆ.
# ಮಣ್ಣಿನ ಪಿ.ಎಚ್ 6.0 ಮತ್ತು 7.5 ರ ನಡುವೆ ಇರಬೇಕು.
# ಶ್ರೀಗಂಧವು ಮುರಕಲ್ಲು ಪ್ರದೇಶ ಮತ್ತು ಜಲ್ಲಿ ಮಿಶ್ರಿತ ಮಣ್ಣನ್ನು ಸಹಿಸಿಕೊಳ್ಳುತ್ತದೆ.

ಸೂಕ್ತವಾದ ಆತಿಥೇಯ ಜಾತಿಯ ಗಿಡದ ಪಕ್ಕದಲ್ಲಿ ಶ್ರೀಗಂಧವನ್ನು ನೆಡಬೇಕು. ಶ್ರೀಗಂಧದ ಮರವು ಸ್ಥಿರವಾದ ಸಾರಜನಕವನ್ನು ಉತ್ಪಾದಿಸುವ ಮತ್ತೊಂದು ಸಸ್ಯದ ಜೊತೆಗೆ ಬೆಳೆದರೆ ಮಾತ್ರ ಒಳ್ಳೆಯ ಫಲ ನೀಡುತ್ತದೆ. ಶ್ರೀಗಂಧದ ಮರವು ತನಗೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯುವ ಸಲುವಾಗಿ ತನ್ನ ಬೇರುಗಳನ್ನು ಆತಿಥೇಯ ಮರದೊಂದಿಗೆ ಸಂಪರ್ಕಿಸುತ್ತದೆ ಮತ್ತು ಪೋಷಕಾಂಶಗಳನ್ನು ಪಡೆಯುತ್ತದೆ. ಅಕೇಶಿಯಾ, ಕಹಿಬೇವು ಮುಂತಾದ ಮರಗಳ ಮಧ್ಯದಲ್ಲಿ ಶ್ರೀಗಂಧವನ್ನು ಬೆಳೆಯಬಹುದು.

ಶ್ರೀಗಂಧವನ್ನು ಬೀಜಗಳ ಮೂಲಕ ಅಥವಾ ನರ್ಸರಿಯಿಂದ ಖರೀದಿಸುವ ಮೂಲಕ ಬೆಳೆಸಬಹುದು.

ಶ್ರೀಗಂಧದ ಗಿಡಗಳನ್ನು 30 ರಿಂದ 3 ಸೆಂಟಿಮೀಟರ್‌(11 ರಿಂದ 1 ಇಂಚುಗಳು) ನ ರಂಧ್ರವನ್ನು ರಚಿಸಿ ನೆಡಬೇಕು. ಗಿಡಗಳನ್ನು 2.5 ಮತ್ತು 4 ಮೀಟರ್ (8 ಮತ್ತು 13 ಅಡಿ) ಅಂತರದಲ್ಲಿ ಇರಿಸಬೇಕು. ಗಿಡಗಳನ್ನು ಬೆಳಗ್ಗಿನ ಜಾವದಲ್ಲಿ ನೆಡುವುದು ಉತ್ತಮ. ಭಾರತದಲ್ಲಿ ಮೇ ಮತ್ತು ಅಕ್ಟೋಬರ್ ನಡುವಿನ ಸಮಯವು ಶ್ರೀಗಂಧದ ಕೃಷಿ ಮಾಡಲು ಅತ್ಯುತ್ತಮ ಕಾಲ.

1 ಮೀಟರ್ ಎತ್ತರದ ಆತಿಥೇಯ ಸಸ್ಯಗಳ 1 ಮೀಟರ್ ವ್ಯಾಪ್ತಿ ಒಳಗೆ ಶ್ರೀಗಂಧದ ಸಸಿಗಳನ್ನು ನೆಡಬೇಕು. ಮೊದಲ 2 ವರ್ಷಗಳಲ್ಲಿ ಮರವು ಆತಿಥೇಯ ಜಾತಿಯ ಜೊತೆ ಸಂಪರ್ಕ ಏರ್ಪಡಿಸದಿದ್ದಲ್ಲಿ ಮರ ಸಾಯುತ್ತದೆ. ಮೊದಲನೆ ವರ್ಷದಲ್ಲಿ ಸುತ್ತಮುತ್ತಲಿನ ಕಳೆಗಿಡಗಳನ್ನು ಸ್ವಚ್ಛ ಮಾಡುತ್ತಿರಬೇಕು ಮತ್ತು ಆತಿಥೇಯ ಮರದ ರೆಂಬೆ ಕೊಂಬೆಗಳನ್ನು ಕಾಲದಿಂದ ಕಾಲಕ್ಕೆ ಕತ್ತರಿಸುತ್ತಿರಬೇಕು. ಅವಶ್ಯಕತೆಗನುಗುಣವಾಗಿ ಮರಕ್ಕೆ ನೀರು ಮತ್ತು ಗೊಬ್ಬರ ಉಣಿಸಬೇಕು.

ರೋಗಗಳು

ಸ್ಪೈಕ್(ಮುಳ್ಳು) ರೋಗವು ಪ್ರಮುಖ ಕಾಯಿಲೆಗಳಲ್ಲಿ ಒಂದಾಗಿದೆ. ಈ ರೋಗವು ಮೈಕೋಪ್ಲಾಸ್ಮಾದಂತಹ ಜೀವಿಗಳಿಂದ ಉಂಟಾಗುತ್ತದೆ. ಇದು ಮರದ ಬೆಳವಣಿಗೆಯ ಯಾವುದೇ ಹಂತದಲ್ಲಿ ಸಂಭವಿಸಬಹುದು. ರೋಗವು ಮುಂದುವರೆದಂತೆ, ಹೊಸ ಎಲೆಗಳು ಚಿಕ್ಕದಾಗಿ, ಕಿರಿದಾಗಿ ಮತ್ತು ಸಂಖ್ಯಯಲ್ಲಿ ಕಡಿಮೆಯಾಗಿ, ಹೆಚ್ಚು ಮೊನಚಾಗಿರುತ್ತವೆ. ಹೊಸ ಚಿಗುರುಗಳು ವರ್ಷಗಳೆದಂತೆ ಮುಳ್ಳಿನ ಆಕಾರವನ್ನು ತಳೆಯುತ್ತಾ ಬರುತ್ತವೆ. ರೋಗದ ಮುಂದಿನ ಹಂತದಲ್ಲಿ ಕೊಂಬೆಗಳ ನಡುವಣ ಅಂತರವು ಚಿಕ್ಕದಾಗುತ್ತದೆ, ಆತಿಥೇಯ ಮರ ಮತ್ತು ಶ್ರೀಗಂಧದ ನಡುವಿನ ಸಂಪರ್ಕವು ಕಡಿದುಹೋಗುತ್ತದೆ ಮತ್ತು ಸಸ್ಯವು ಸುಮಾರು 2 ರಿಂದ 3 ವರ್ಷಗಳಲ್ಲಿ ಸಾಯುತ್ತದೆ. ನೆಫೋಟೆಟಿಕ್ಸ್ ವೈರೆಸೆನ್‌ಗಳ ಜೊತೆಗೆ ಇತರ ಕೀಟ ವಾಹಕಗಳು ಸಹ ರೋಗದ ಹರಡುವಿಕೆಗೆ ಕಾರಣವಾಗಿರಬಹುದು ಎಂದು ಕಂಡುಬಂದಿದೆ. ಸ್ಪೈಕ್ ಕಾಯಿಲೆಯ ನಿಯಂತ್ರಣಕ್ಕೆ ಇಲ್ಲಿಯವರೆಗೆ ಯಾವುದೇ ಶಾಶ್ವತ ಪರಿಹಾರ ಕ್ರಮಗಳನ್ನು ಸೂಚಿಸಲಾಗಿಲ್ಲ.

A critical appraisal on the recurrence of sandalwood spike disease and its management practices - Mondal - 2020 - Forest Pathology - Wiley Online Library

ಭಾರತದ ಶ್ರೀಗಂಧವು ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇದೆ. ಮೈಸೂರು ಶ್ರೀಗಂಧದ ಮರದ ದಿಮ್ಮಿಗಳು ರೂ 26500/ಕೆಜಿ ಗೆ ಮಾರಾಟವಾಗುತ್ತವೆ. ಮರದಿಂದ ಗಂಧದ ಮರವನ್ನು ಪಡೆಯಲು ಕನಿಷ್ಠ 15 ರಿಂದ 20 ವರ್ಷಗಳು ಬೇಕಾಗುತ್ತದೆ. ಎದೆಯ ಎತ್ತರದಲ್ಲಿ 2½ ರಿಂದ 3 ಅಡಿ ಸುತ್ತಳತೆ (ಸುತ್ತಳತೆ) ತಲುಪಿದ ನಂತರ ಮರವನ್ನು ಕತ್ತರಿಸಬಹುದು.

ಮಾಹಿತಿ: ಇಂಟರ್ನೆಟ್ ಮೂಲಗಳಿಂದ