ಹೆಬ್ರಿ: ಮಾರ್ಚ್ 4 ರಂದು ಯಕ್ಷೋತ್ಸವ- ಕರ್ಣಾರ್ಜುನ ಯಕ್ಷಗಾನ ಪ್ರಸಂಗ

ಹೆಬ್ರಿ: ಪೆರ್ಡೂರು ಮೇಳ ಸುಪ್ರಸಿದ್ದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಹೆಬ್ರಿ ಯಕ್ಷೋತ್ಸವ ಬಡಗಿನ ಗಾನ ಗಾರುಡಿಗ ಜನ್ಸಾಲೆ ಸಾರಥ್ಯ ಕರ್ಣಾರ್ಜುನ ಮಾರ್ಚ್ 4 ಶನಿವಾರದಂದು ಹೆಬ್ರಿಯ ಅನಂತ ಪದ್ಮನಾಭ ದೇವಸ್ಥಾನ ವಠಾರದಲ್ಲಿ ಜರಗಲಿದೆ.

ಡೈನಾಮಿಕ್ ಸ್ಟಾರ್ ಜಲವಳ್ಳಿಯವರ ಕರ್ಣ ಹಾಗೂ ಇತ್ತೀಚಿಗೆ ಯಕ್ಷರಂಗದಲ್ಲಿ ಕುಣಿತದಲ್ಲಷ್ಟೇ ಅಲ್ಲದೇ ತನ್ನ ವಾಕ್ಚಾತುರ್ಯದಿಂದಲೂ ಪ್ರಖ್ಯಾತಿಗಳಿಸುತ್ತಿರುವ ಹೆನ್ನಾಬೈಲು ವಿಶ್ವನಾಥರ ಶಲ್ಯ…!

ಯಕ್ಷ ಸ್ವರ ಸಿಂಹ ಥಂಡಿ ಭಟ್ಟರ ಅರ್ಜುನ – ಹೆಬ್ರಿ ಪರಿಸರದಲ್ಲಿ ಪ್ರಪ್ರಥಮ ಬಾರಿಗೆ ಯಲಗುಪ್ಪರ ಶ್ರೀ ಕೃಷ್ಣ…!

ಮತ್ತೆ ಮತ್ತೆ ಕಾಣಸಿಗದು ಈ ಎರಡು ಹೈ ವೋಲ್ಟೇಜ್ ಮುಖಾಮುಖಿ,ಮಾತಿನ ಚಕಮಕಿ…!