ಕಾರ್ಕಳ ಎಂ. ಪಿ.ಎಂ. ನಲ್ಲಿ ಐ. ಕ್ಯೂ. ಎ. ಸಿ. ಕಾರ್ಯಕ್ರಮ ಉದ್ಘಾಟನೆ

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಐ. ಕ್ಯೂ. ಎ. ಸಿ.ಮತ್ತು ಮಾನವೀಯ ಚಟುವಟಿಕೆ ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮ.ಡಿ.16. ರಂದು ಕಾಲೇಜು ನಲ್ಲಿ ನಡೆಯಿತು.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಸಂಜೀವ ವಡ್ಸೆ ಅವರು ಆಗಮಿಸಿ.ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ.ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ತೃತೀಯಲಿಂಗಿಯರು ಮತ್ತು ಮಂಗಳಮುಖಿಯರು ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಹೇಳಿಕೊಂಡರು, ಸಮಾಜದಲ್ಲಿನ ಜನರು ಅವರನ್ನು ಕಾಣುವ ರೀತಿ ಮತ್ತು ಅದಕ್ಕೆ ಸೂಕ್ತ ಬದಲಾವಣೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಶ್ರೀ ವರ್ಮಾ ಅಜ್ರಿ ಅವರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ಐ.ಕ್ಯೂ.ಎ.ಸಿ. ಚಾಲಕಿ ಜ್ಯೋತಿ ಎಲ್ ಜನ್ನೇ ಮತ್ತು ಮಾನವಿಕ ಸಂಘದ ಚಾಲಕರಾದ ಕಿರಣ್ ಹಾಗೂ ವಿದ್ಯಾರ್ಥಿ ನಾಯಕರಾದ ಸಿಲ್ವಿಯ ಮತ್ತು ಯಮುನಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಮುನಪ್ಪ ಪರಿಚಯಿಸಿದರು.ಗಣೇಶ್ ಸ್ವಾಗತಿಸಿದರು. ನಿವೇದಿತಾ ಕಾರ್ಯಕ್ರಮ ನಿರೂಪಿಸಿದರು .ಸಿಲ್ವಿಯಾ ವಂದಿಸಿದರು.