ಉಡುಪಿ: ಕಾರ್ಕಳ–ಹೆಬ್ರಿ ರಸ್ತೆಯ ವರಂಗದ ಬಳಿ ಇಂದು ಬೆಳಿಗ್ಗೆ ಸ್ಲೀಪರ್ ಬಸ್ ಹಾಗೂ ಕೆಂಪು ಕಲ್ಲು ಹೊತ್ತ ಲಾರಿ ನಡುವೆ ಅಪಘಾತ ಸಂಭವಿಸಿದೆ. ಬಸ್ನಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಸುರಕ್ಷಿತರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿ, ಸಂಚಾರ ವ್ಯವಸ್ಥೆ ಸುಗಮಗೊಳಿಸಿದ್ದಾರೆ.

















