ಕಾರ್ಕಳ: ಮುನಿಮಹಾರಾಜರ ಪಿಂಛಿ ಪರಿವರ್ತನಾ ಕಾರ್ಯಕ್ರಮ

ಕಾರ್ಕಳ: ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಸಂಕುಚಿತ ಮನೋಭಾವ ಸೃಷ್ಟಿಯಾಗುತ್ತಿದೆ. ನಮ್ಮ ದೇವರ ಬಗ್ಗೆಹೇಳಬೇಕಾದರೆ, ಧರ್ಮದ ಆಚಾರ ವಿಚಾರಗಳನ್ನುರಕ್ಷಣೆ ಮಾಡಬೇಕಾದರೆ ನಮ್ಮಲ್ಲಿ ಸಂಕೋಚ ಮೂಡುತ್ತದೆ. ಮೂಡನಂಬಿಕೆ,ಹಳೇ ಸಂಪ್ರದಾಯದವರು ಅಥವಾ ಆಧುನಿಕತೆಗೆ ಸರಿಯಾಗಿಒಗ್ಗುತ್ತಿಲ್ಲ ಅನ್ನುವ ಯೋಚನೆಗಳು ಮೂಡುತ್ತಿದೆ ಆದರೆಮುನಿ ಮಹಾರಾಜರ ಚಾರ್ತುಸದಿಂದಾಗಿ ಅದೆಲ್ಲವೂದೂರವಾಗಿದೆ ಎಂದು ಶ್ರೀ ಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ  ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಪರಮಪೂಜ್ಯ ೧೦೮ ಶ್ರೀ ವೀರಸಾಗರ ಮುನಿಮಹಾರಾಜರ ಚಾತುರ್ಮಾಸ ಸಮಿತಿ ಆಶ್ರಯದಲ್ಲಿ ಪರಮಪೂಜ್ಯ ೧೦೮ ಮುನಿಶ್ರೀ ವೀರಸಾಗರ ಮಹಾರಾಜರಿಗೆ ಶಾಸ್ತ್ರದಾನ, ಪಿಂಛಿ ಪ್ರದಾನ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯನ್ನು ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯಲ್ಲಿ ಜೈನ ಶ್ರಾವಕ ಶ್ರಾವಕಿಯರಿದ್ದರೂ, ಮುನಿಗಳ ಸೇವೆ ಮಾಡುವುದಿಲ್ಲ ಎನ್ನುವ ಅಪವಾದವಿತ್ತು. ಚಾತುರ್ಮಾಸದಿಂದಾಗಿ ಆ ಅಪವಾದವೂ ತಪ್ಪಿದೆ ಎಂದವರು ಹೇಳಿದರು.

ಹಿರಿಯ ವಿದ್ವಾಂಸ ಪ್ರೊ| ಹಂಪ ನಾಗರಾಜಯ್ಯ ಅವರು ಮಾತನಾಡಿ, ಪಿಂಛಿ ಅಹಿಂಸೆಯ ಪ್ರತೀಕ. ಜಾಣ್ಮೆಗಿಂತ ತಾಳ್ಮೆ ಮುಖ್ಯ ಎಂದು ಸಮಾಜಕ್ಕೆ ತಿಳಿಸಿದ ಧರ್ಮ ಜೈನ ಧರ್ಮ. ತಾಳ್ಮೆಗೆ ಸಂಬಂಧಿಸಿದಂತೆ ಅನೇಕ ಅಗ್ನಿಪರೀಕ್ಷೆಗಳು ಧರ್ಮಕ್ಕೆ ಎದುರಾಗಿದೆ ಎಂದರು. ಸಮಾರಂಭದಲ್ಲಿ ಬ್ರಹ್ಮಚಾರ್ಯರಿಗೆ ವಸ್ತ್ರದಾನ, ಸೇವಾಕರ್ತೃಗಳು, ದಾನಿಗಳು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ನಡೆಯಿತು. ಮುನಿಶ್ರೀ ೧೦೮ ವೀರಸಾಗರ ಮಹಾರಾಜರು ಮಂಗಲ ಪ್ರವಚನ ನೆರವೇರಿಸಿದರು.

ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತೀ ಭಟ್ಟಾರಕ ಪಟ್ಟಚಾರ್ಯವರ್ಯ ಮಹಾಸ್ವಾಮೀಜಿ, ಮೂಡಬಿದಿರೆ ಜೈನಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಸೋಂದಾ ಜೈನಮಠದ ಶ್ರೀ , ನರಸಿಂಹರಾಜಪುರ ಜೈನಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಬ್ರಹ್ಮಚಾರಿ ಅಶೋಕ್ ಜೈನ್, ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ಸಪ್ರೀಯಾ ಹೆಗ್ಗಡೆ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಎಂ.ಕೆ ವಿಜಯಕುಮಾರ್, ಶಶಿಕಲಾ ಹೆಗ್ಡೆ ಉಪಸ್ಥಿತರಿದ್ದರು.  ಅಂಡಾರು ಮಹಾವೀರ ಹೆಗ್ಡೆ ಸ್ವಾಗತಿಸಿ, ನವಿತಾ ಜೈನ್ ವಂದಿಸಿದರು.