ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಿನೇಶ್ ಪ್ರಭು ಕಲ್ಲೊಟ್ಟೆ ಅವರಿಗೆ ಅಭಿನಂದನೆ

ಕಾರ್ಕಳ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತುಳು, ಕೊಂಕಣಿ, ಕನ್ನಡ ನಾಟಕ, ರಚನೆಗಾರ, ದಿನೇಶ್ ಪ್ರಭು ಕಲ್ಲೊಟ್ಟೆಯವರಿಗೆ ಅರಸ್ ಕಟ್ಟೆ ಪ್ರಭು ಫ್ಯಾಮಿಲಿಯವರಿಂದ ಕಾರ್ಕಳದ ಕಾಶಿ ಮಠದಲ್ಲಿ ಇತ್ತೀಚೆಗೆ ಅಭಿನಂದಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಡಾ| ಜಗದೀಶ್ ಪೈ  ವಹಿಸಿದ್ದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ವಿಜಯ ಶೆಟ್ಟಿ, ಸುರೇಂದ್ರ ಭಟ್, ರವೀಂದ್ರ ಪ್ರಭು, ಸುರೇಶ್ ಪ್ರಭು, ಹಿರಿಯ ಕಲಾವಿದ ಮೋಹನ್ ದಾಸ್ ಪ್ರಭು, ಕಾರ್ಕಳದ ಅಂಚೆ ಇಲಾಖೆಯ ಉಪ ಅಧೀಕ್ಷಕ ಧನಂಜಯ್ ಆಚಾರ್ ಶುಭ ಹಾರೈಸಿದರು. ಪ್ರಕಾಶ್ ಪ್ರಭು ಸ್ವಾಗತಿಸಿದರು, ಶೋಭಾ ಬಾಸ್ಕರ್ ಕಾರ್ಯಕ್ರಮ ನಿರೂಪಿಸಿದರು, ನಾಗೇಶ್ ಪ್ರಭು ವಂದಿಸಿದರು.