ಕಾರ್ಕಳ: ಹಿಂದು ಜಾಗರಣ ವೇದಿಕೆಯಿಂದ ಭಾರತ್ ಮಾತಾ ಪೂಜನ್ ಕಾರ್ಯಕ್ರಮ

ಕಾರ್ಕಳ: ಹಿಂದು ಜಾಗರಣ ವೇದಿಕೆ ಕಾರ್ಕಳ-ಬೆಳ್ಮಣ್ ವಲಯದ ವತಿಯಿಂದ
ಪಡು ಬೆಳ್ಮಣ್ ಶ್ರೀ ಮಹಾಗಣಪತಿ- ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಭಾರತ್ ಮಾತಾ ಪೂಜನ್ ಕಾರ್ಯಕ್ರಮ ನಡೆಯಿತು.

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅರ್ಚಕ ರಾಮದಾಸ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಹಿಂಜಾವೇ ಉಡುಪಿ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ನಾಯಕ್, ಹಿಂಜಾವೇ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಬೈಲೂರ್, ಹಿಂಜಾವೇ ಕಾರ್ಕಳ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ, ಶ್ರೀ ಮಹಾಗಣಪತಿ-ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕೇಸ್ತರರಾದ ರಘುವೀರ್ ರಾವ್, ಹಿಂಜಾವೇ ಬೆಳ್ಮಣ್ ವಲಯ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಹಿಂಜಾವೇ ಬೆಳ್ಮಣ್ ವಲಯದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಕ್ಕದಕಟ್ಟೆ ಉಪಸ್ಥಿತರಿದ್ದರು.

ನವ್ಯ ಪ್ರಾರ್ಥಿಸಿದರು. ವಾಗ್ಮಿ ಚೈತ್ರಾ ಕುಂದಾಪುರ ದಿಕ್ಸೂಚಿ ಭಾಷಣ ಮಾಡಿದರು. ಹಿಂಜಾವೇ ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಹಿಂಜಾವೇ ಜಿಲ್ಲಾ ಭೂ ಸುರಕ್ಷಾ ಸಂಯೋಜಕ ರಮೇಶ್ ಕಲ್ಲೊಟ್ಟೆ, ಹಿಂಜಾವೇ ಜಿಲ್ಲಾ ಹಿಂದು ಯುವವಾಹಿನಿ ಸಂಯೋಜಕ್ ಉಮೇಶ್ ನಾಯ್ಕ್, ಜಿಲ್ಲಾ ಮಾತೃ ಸುರಕ್ಷಾ ಸಹ ಸಂಯೋಜಕ ಅನಿಲ್ ನಿಟ್ಟೆ, ಹಿಂಜಾವೇ ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಆಚಾರ್ಯ ಸೂಡ ಮತ್ತು ಹಿಂಜಾವೇ ಮುಖಂಡರಾದ ಚಂದ್ರಶೇಖರ ಶೆಟ್ಟಿ, ಸುಜಿತ್ ಸಫಲಿಗ, ಹರೀಶ್ ಕಿಚ್ಚ ಮುಡಾರು, ರಮೇಶ್ ಅಯೋಧ್ಯ ನಗರ ಮತ್ತು ತಿಲಕ್ ಸಾಣೂರ್ ಪಾಲ್ಗೊಂಡಿದ್ದರು.

ಸಂಘ ಪರಿವಾರದ ಪ್ರಮುಖರಾದ ಬೋಳ ಸದಾಶಿವ ಶೆಟ್ಟಿ, ಪ್ರಕಾಶ್ ರಾವ್ ಕಾರ್ಕಳ, ಸುಭಾಷ್ ಹೆಗ್ಡೆ,ಮೋಹನ್ ದಾಸ್ ಶೆಟ್ಟಿ, ದೇವೆಂದ್ರ ಶೆಟ್ಟಿ, ಜನಾರ್ದನ್ ತಂತ್ರಿ, ಸೂರ್ಯಕಾಂತ್ ಶೆಟ್ಟಿ, ದೇವೇಂದ್ರ ನಾಯಕ್, ದಿನೇಶ್ ಬೆಳ್ಮಣ್, ಗಿರೀಶ್ ನಂದಳಿಕೆ, ಪ್ರಭಾಕರ್ ಶೆಟ್ಟಿ ಪೆರಲ್ಪಾದೆ ಮತ್ತು ಆಶಾ ದೇವೇಂದ್ರ ಶೆಟ್ಟಿ ಮೊದಲಾದವರು ಸಹಕರಿಸಿದರು.