ಬೈಲೂರು: ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ಬೃಹತ್ ಪಂಜಿನ‌ ಮೆರವಣಿಗೆ 

ಕಾರ್ಕಳ: ವಿಶ್ವ ಹಿಂದೂ ಪರಿಷತ್ ಕಾರ್ಕಳ ಪ್ರಖಂಡ ಹಾಗೂ ಬಜರಂಗ ದಳ ವಲಯದ‌ ವತಿಯಿಂದ ಅಖಂಡ ಭಾರತ ಸಂಕಲ್ಪ ‌ದಿನದ ಅಂಗವಾಗಿ ಬೃಹತ್ ಪಂಜಿನ‌ ಮೆರವಣಿಗೆ ಆಗಸ್ಟ್‌ 14ರಂದು ಸಂಜೆ ಬೈಲೂರಿನಲ್ಲಿ ನಡೆಯಿತು.
ನೀರೆ ಪಳ್ಳಿ ಕ್ರಾಸ್ ನಿಂದ ಬೈಲೂರು ಶ್ರೀ ರಾಮ ಮಂದಿರದ ವರೆಗೆ ಬೃಹತ್ ಪಂಜಿನ‌ ಮೆರವಣಿಗೆ ನಡೆಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಉದ್ಯಮಿ ಚಂದ್ರಶೇಖರ ಮಾಡ ಮೆರವಣಿಗೆಗೆ ಚಾಲನೆ ನೀಡಿದರು.‌ ಆರ್ ಎಸ್ ಎಸ್ ನ ಹಿರಿಯಡ್ಕ ಬೈಲೂರು ವಲಯ ಕಾರ್ಯವಾಹ ಮಂಜುನಾಥ ಭಟ್ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಜರಂಗ ದಳದ ಕರ್ನಾಟಕ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಿದರು.
ಸುಧೀರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ‌ಸದಸ್ಯ ಸುಮಿತ್ ಶೆಟ್ಟಿ ಬೈಲೂರು, ಮಹೇಶ್ ಶೆಣೈ ಬೈಲೂರು, ರಮೇಶ್ ಪೂಜಾರಿ, ಕೃಷ್ಣರಾಜ ಹೆಗ್ಡೆ, ಸುರೇಶ್ ಸಾಲಿಯಾನ್, ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ನ ಮಠ ಮಂದಿರಗಳ ಪ್ರಮುಖ್ ರಮೇಶ್ ಕಲ್ಲೊಟ್ಟೆ ಪ್ರಸ್ತಾವನೆಗೈದರು.
ಪ್ರದೀಪ್ ಪೂಜಾರಿ ಸ್ವಾಗತಿಸಿದರು. ಶ್ರೀನಿವಾಸ ಪೂಜಾರಿ ಎರ್ಲಪಾಡಿ ನಿರೂಪಿಸಿದರು.