ಕಾಂತಾರ ದೈವನರ್ತಕ ನವೀನ್ ಬೊಂದೆಲ್ ಗೆ ಸಲಾರ್ ಚಿತ್ರದಲ್ಲಿ ನಟಿಸುವ ಅವಕಾಶ

ಕಾಂತಾರ ಸಿನಿಮಾದಲ್ಲಿ ದೈವನರ್ತಕನಾಗಿ ನಟಿಸಿದ್ದ ನವೀನ್ ಬೊಂದೆಲ್ ಅವರಿಗೆ ಸಲಾರ್ ಸಿನಿಮಾದಲ್ಲಿ ನಟಿಸಲು ಅವಕಾಶ ದೊರಕಿದೆ ಎಂದು ವರದಿಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಹೊಂಬಾಳೆ ಫಿಲಂಸ್ ನ ಸಲಾರ್ ಚಿತ್ರದ ಒಂದು ಪಾತ್ರದಲ್ಲಿ ನಟಿಸಲು ನವೀನ್ ಅವರಿಗೆ ಅವಕಾಶ ದೊರೆತಿದೆ.

ನವೀನ್ ಬೊಂದೆಲ್ ಒಬ್ಬ ನಟ ಮತ್ತು ನಿರ್ದೇಶಕ. ಕಾಂತಾರ ಚಿತ್ರದಲ್ಲಿ ಕಾಣಿಸಿಳ್ಳುವುದಕ್ಕೂ ಮುನ್ನ ಅವರು ಹಲವಾರು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಬಸ್ ಕಂಡಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಮಂಗಳೂರಿನ ಕೆನರಾ ಹೈಸ್ಕೂಲ್ ಮತ್ತು ಶ್ರೀಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 2016 ರಲ್ಲಿ ಕನ್ನಡ ಮ್ಯೂಸಿಕ್ ವೀಡೀಯೋ ಬುದ್ದಿ ಶಾಲಿ ತುಳು, 2021 ರಲ್ಲಿ ಕೊಪ್ಪರಿಗೆ ಎನ್ನುವ ನಾಟಕದಲ್ಲಿ ಅಭಿನಯಿಸಿದ್ದಾರೆ.

ನನ್ನ ಕೆಂಗಂದು ಮಿಶ್ರಿತ ಹಸಿರು ಬಣ್ಣದ ಕಣ್ಣುಗಳು ನನಗೆ ದೇವರಿತ್ತ ವರದಾನ. ಈ ಕಣ್ಣುಗಳಿಂದಾಗಿಯೆ ನನಗೆ ಕಾಂತಾರ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು ಮತ್ತು ಮುಂದೆಯೂ ಇತರ ಕಡೆ ನಟಿಸುವ ಅವಕಾಶ ದೊರೆಯುತ್ತದೆ ಎಂದು ನಾನು ನಂಬುತ್ತೇನೆ. ಈ ಕಣ್ಣುಗಳಿಂದಾಗಿಯೆ ನಾನು ನನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಾಯಿತು ಎಂದು ನಂಬುತ್ತೇನೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನವೀನ್ ಬೊಂದೆಲ್ ವಿವಾಹಿತಾಗಿದ್ದು ಅವರಿಗೆ ಒಬ್ಬ ಮಗಳಿದ್ದಾಳೆ ಎನ್ನಲಾಗಿದೆ.

ಏತನ್ಮಧ್ಯೆ, ಕಾಂತಾರ ಚಿತ್ರದ ಓಟವು ನಿಲ್ಲುವಂತೆ ಕಾಣುತ್ತಿಲ್ಲ. ಚಿತ್ರವು ವಿಶ್ವದಾದ್ಯಂತ 400 ಕೋಟಿ ರೂ ನಿವ್ವಳ ಲಾಭ ಗಳಿಸಿದೆ.