ರೋಟರಿ ಜಿಲ್ಲೆ 3182 ವತಿಯಿಂದ ಕಲ್ಯಾಣಸಿರಿ ರೋಟರಿ ದತ್ತಿನಿಧಿ ಮತ್ತು ಪೋಲಿಯೋ ಪ್ಲಸ್ ಸೆಮಿನಾರ್

ಉಡುಪಿ: ರೋಟರಿ ಜಿಲ್ಲೆ 3182 ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡ, ಕಲ್ಯಾಣಸಿರಿ ರೋಟರಿ ದತ್ತಿನಿಧಿ (TRF) ಯನ್ನು ಪೋಲಿಯೋ ಪ್ಲಸ್ ಸೆಮಿನಾರ್ ಕಾರ್ಯಕ್ರಮವು ಅಮೃತ್‌ಗಾರ್ಡನ್ ನಲ್ಲಿ ಜರಗಿತು.

ಮಾಜಿ ಗವರ್ನರ್ ಹಾಗೂ RI ಟ್ರಸ್ಟಿ ಗುಲಾಮ್ ವಹನ್ವತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ರೋಟರಿಯ ಸೇವೆಯು ಶಾಂತಿಯ ಸಂಕೇತ, ಸಮಾಜದಲ್ಲಿ ಶಾಂತಿಯನ್ನು ಕಾಪಾಡುವ ಕೆಲಸವನ್ನು ರೋಟರಿ ಸದಸ್ಯರು ಮಾಡಬೇಕಾಗಿದೆ. ತಮ್ಮ ತಮ್ಮ ಬದುಕನ್ನು ಮತ್ತು ಸೇವೆ ಸಲ್ಲಿಸುತ್ತಿರುವ ತಮ್ಮ ಸಮುದಾಯದಲ್ಲಿ ರೋಟರಿ ಒದಗಿಸುತ್ತಿರುವ ವಿಶಾಲ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ರೋಟರಿ ಜೊತೆ ಕೈ ಜೋಡಿಸಿ ಮುಂದೆ ಬರಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ, ರೋಟರಿ ದತ್ತಿನಿಧಿಗೆ 100 ಕೋಟಿ ದೇಣಿಗೆ ನೀಡಿದ ರೊ. ರವಿಶಂಕರ್ ದಾಕೋಜಿ ಮಾತನಾಡಿ, ರೋಟರಿ ಫೌಂಡೇಶನ್ ವಿಶ್ವದಾದ್ಯಂತ ಮನುಕುಲದ ಏಳಿಗೆಗಾಗಿ ನಿಸ್ವಾರ್ಥವಾಗಿ ತನ್ನ ನಿಧಿಯನ್ನು ಬಳಸುತ್ತಿದೆ. ಅಂತಹ ಪಾರದರ್ಶಕತೆಯನ್ನು ಬೆಳೆಸುವ ಬಾಧ್ಯತೆ ನಮ್ಮೆಲ್ಲರದ್ದಾಗಿದೆ. ಆದ್ದರಿಂದ ರೋಟರಿ ದತ್ತಿನಿಧಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು.

ಅಧ್ಯಕ್ಷತೆಯನ್ನು ಜಿಲ್ಲಾ ಗವರ್ನರ್ ರೊ. ಬಿ.ಸಿ. ಗೀತಾ ವಹಿಸಿದ್ದರು.

ಜಿಲ್ಲಾ ತರಬೇತುದಾರರಾದ ರೊ. ಪಿ.ಡಿ.ಜಿ. ಅಭಿನಂದನ್ ಶೆಟ್ಟಿ ಮಾತನಾಡಿ, ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇದರ ನೇತೃತ್ವ ವಹಿಸಿದ ರೋಟರಿ ಕಲ್ಯಾಣಪುರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿ.ಆರ್.ಎಫ್.ಸಿ. ರೊ. ಪಿಡಿಜಿ ಪಿ. ನಾರಾಯಣ ರಾವ್‌ ದತ್ತಿನಿಧಿ ಹಾಗೂ ಗ್ಲೋಬಲ್ ಗ್ರಾಂಟ್ ಬಗ್ಗೆ ಮಾಹಿತಿ ನೀಡಿದರು. ನಿಕಟಪೂರ್ವ ಜಿಲ್ಲಾ ಗವರ್ನರ್ ರೊ. ಎಚ್.ಎ. ಗೌರಿ ಇವರು 2022-23ನೇ ಸಾಲಿನ ಪ್ರಶಸ್ತಿಯನ್ನು ವಿತರಿಸಿದರು.

ವೇದಿಕೆಯಲ್ಲಿ ಪಿಡಿಜಿ ಎಚ್.ಆರ್. ಅನಂತ್, ರೊ. ಸುರೇಂದ್ರ ರೆಡ್ಡಿ, ರೊ. ಡಾ. ಗಿರೀಶ್ ಗುಣೆ, ಪಿಡಿಜಿ ಶ್ಯಾಮ್ ಮೊವ್ವ, ನಿಯೋಜಿತ ಜಿಲ್ಲಾ ಗವರ್ನರ್ ರೊ. ದೇವಾನಂದ್, ಗವರ್ನರ್ ನಾಮಿನಿ ರೊ. ಪಾಲಾಕ್ಷ, ಪಿಡಿಜಿ ರೊ. ಡಿ.ಎಸ್. ರವಿ, ರೊ. ಪಿ.ಡಿ.ಜಿ. ರಾಜಾರಾಮ್ ಭಟ್, ಅಸಿಸ್ಟೆಂಟ್ ಗವರ್ನರ್ ರೊ. ಆಲ್ವಿನ್ ಕ್ವಾಡ್ರಸ್, ರೋಟರಿ ಕಲ್ಯಾಣಪುರದ ಅಧ್ಯಕ್ಷ ರೊ. ದಿವಾಕರ್ ಪಿ., ಕಾರ್ಯದರ್ಶಿ ರೊ. ಗಿರೀಶ್ಚಂದ್ರ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಪಿಡಿಜಿ ರಾಜಾರಾಮ್ ಭಟ್‌ ಸ್ವಾಗತಿಸಿದರು. ಕಾರ್ಯದರ್ಶಿ ರೂ. ಅಲೆನ್ ವಿನಯ್ ಲೂವಿಸ್‌ ವಂದಿಸಿದರು. ಸುಚಿತ್ ಕೋಟ್ಯಾನ್ ಹಾಗೂ ರೊ. ರಾಮಕೃಷ್ಣ ಆಚಾರ್ಯ ನಿರೂಪಿಸಿದರು.

2 ದಿನದ ಕಾರ್ಯಕ್ರಮದಲ್ಲಿ ಸುಮಾರು 1000 ರೋಟರಿ ಸದಸ್ಯರು ಭಾಗವಹಿಸಿದರು.