ಕಡಬ: ಕಿದು ಸಿ.ಪಿ.ಸಿ.ಆರ್.ಐ.‌ ಕೃಷಿ ಸಂಶೋಧನಾ ಕೇಂದ್ರ; ಕೃಷಿ ಹಾಗೂ ತೋಟಗಾರಿಕಾ ಮೇಳಕ್ಕೆ ಚಾಲನೆ

ಮಂಗಳೂರು: ಕರ್ನಾಟಕದ ಏಕೈಕ ಕಡಬ ತಾಲೂಕಿನ ಬಿಳಿನೆಲೆ ಕಿದು ಸಿ.ಪಿ.ಸಿ.ಆರ್.ಐ. ಕೃಷಿ ಸಂಶೋಧನಾ ಕೇಂದ್ರದಲ್ಲಿ ಎರಡು ದಿನಗಳ‌ ಕಾಲ ನಡೆಯಲಿರುವ ಕೃಷಿ ಮತ್ತು ತೋಟಗಾರಿಕಾ ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಅಕ್ಟೋಬರ್ 12 ಹಾಗೂ 13 ರಂದು ನಡೆಯುತ್ತಿರುವ ಕೃಷಿ ಮೇಳದ ಉದ್ಘಾಟನೆಯನ್ನು ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ಅವರು ಉದ್ಘಾಟಿಸಿದರು.
ಸಿ.ಪಿ.ಸಿ.ಅರ್.ಐ. ನಿರ್ದೇಶಕರಾದ ಅನಿತಾ ಕರುಣ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರಾದ ಶಾರದಾ ದಿನೇಶ್ ಗೌಡ, ನಿತ್ಯಾನಂದ ಮುಂಡೋಡಿ,‌ ಪಿ.ಪಿ. ವರ್ಗೀಸ್, ಸತೀಶ್ ಕಲಿಗೆ, ಕೆ.ಸಂಶುದ್ದೀನ್, ಕೃಷಿ  ವಿಜ್ಞಾನಿಗಳು. ನೂರಾರು ಸಂಖ್ಯೆಯಲ್ಲಿ ಕೃಷಿಕರು ಸಮಾರಂಭದಲ್ಲಿ ಪಾಲ್ಗೊಂಡರು. ಕೃಷಿಕರಿಗೆ ಅನುಕೂಲವಾಗುವಂತೆ ವಿವಿಧ ರೀತಿಯ ಕೃಷಿ ಸಲಕರಣೆಗಳು, ವಿಶೇಷ ಫಲಪುಷ್ಪ ಗಿಡಗಳ ಪ್ರದರ್ಶನ, ಕೃಷಿ ಉತ್ಪನ್ನಗಳ ಪ್ರದರ್ಶನಗಳು ನಡೆಯಿತು.
ಬಹುತೇಕ ಕೃಷಿಕರು ಸಮ್ಮೇಳನದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.