ಜೂನ್ 3: ಬೈಸಿಕಲ್ ಜಾಥಾ

ಉಡುಪಿ: ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ಬೈಸಿಕಲ್ ಸವಾರಿಯ ಮಹತ್ವದ ಕುರಿತ ಬೈಸಿಕಲ್ ಜಾಥಾ ಕಾರ್ಯಕ್ರಮಕ್ಕೆ ಜೂನ್ 3 ರಂದು ಬೆಳಗ್ಗೆ 6.30 ಕ್ಕೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಹಸಿರು ನಿಶಾನೆ ತೋರಲಿದ್ದು, ಮಲ್ಪೆಯ ಮಹಾತ್ಮಾ ಗಾಂಧೀ ಪ್ರತಿಮೆಯ ಬಳಿ ರ‍್ಯಾಲಿಯು ಅಂತ್ಯಗೊಳ್ಳಲಿದೆ.

ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸೈಕಲಿಂಗ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ವ್ಯಕ್ತಿಗಳನ್ನು ಗೌರವಿಸಲಾಗುವುದು ಹಾಗೂ ಸದೃಢ ಆರೋಗ್ಯಕ್ಕೆ ಸೈಕಲಿಂಗ್ ಹೇಗೆ ಉಪಕಾರಿಯಾಗುವುದು ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ವಿಮರ್ಶೆ ನಡೆಯಲಿದೆ.

ರ‍್ಯಾಲಿಯಲ್ಲಿ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ, ಉಡುಪಿ ಸೈಕ್ಲಿಂಗ್ ಕ್ಲಬ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್, ಉಡುಪಿಯ ರೈಡ್ ಫಾರ್ ಹೆಲ್ತ್ ಗ್ರೂಫ್, ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಲಯನ್ಸ್ ಕ್ಲಬ್ ಉಡುಪಿ ಇವುಗಳು ಭಾಗವಹಿಸಲಿದ್ದು, ಸೈಕಲಿಂಗ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಂಸ ಪತ್ರವನ್ನು ನೀಡಲಾಗುವುದು ಎಂದು ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿ ಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.