ಉಡುಪಿ: ಜೆಸಿಐ ಭಾರತದ ವಲಯದ ಹದಿನೈದರ ಪ್ರತಿಷ್ಠಿತ ಘಟಕವಾದ ಜೆಸಿಐ ಪರ್ಕಳದ ನೂತನ ಅಧ್ಯಕ್ಷರಾಗಿ ಜೆಸಿ ಭರತ್ ಕುಲಾಲ್ ಹಾಗೂ ಕಾರ್ಯದರ್ಶಿಯಾಗಿ ಜೆಸಿ ನಿತೀಶ್ ನಾಯ್ಕ್ ಇವರ ಪದಪ್ರಧಾನ ಕಾರ್ಯಕ್ರಮವು ಡಿಸೆಂಬರ್ 14 ಆದಿತ್ಯವಾರ ದಂದು ಸುರಕ್ಷಾ ಸಭಾ ಭವನ ಪರ್ಕಳದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ವಲಯ ಅಧ್ಯಕ್ಷರಾದ ಜೆಸಿ PPP ಗಿರೀಶ್ ಎಸ್ ಪಿ ಉದ್ಯಮಿಗಳಾದ ಕರುಣಾಕರ ಶೆಟ್ಟಿ ,ವಲಯ ಹದಿನೈದರ ಉಪಾಧ್ಯಕ್ಷರಾದ ಜೆಸಿ ಕಾಶಿನಾಥ್ ಗೋಗಟೆ, ವಲಯದ ನಿರ್ದೇಶಕರಾದ ಸ್ವರಾಜ್ ಶೆಟ್ಟಿ ಪರ್ಕಳ , ಜೆಸಿಐ ಪರ್ಕಳದ ಸ್ಥಾಪಕ ಅಧ್ಯಕ್ಷರಾದ ಜೆಸಿ ಅಚ್ಯುತ್ ನಾಯ್ಕ್ , ನಿಕಟಪೂರ್ವ ಅಧ್ಯಕ್ಷೆ ರಮ್ಯಾ ನಾಯಕ ಕಾರ್ಯಕ್ರಮದ ಸಂಯೋಜಕರಾಗಿ ಜೆಸಿ ಸಂದೀಪ್ ನಾಯ್ಕ್ ಹಾಗೂ ಜೆಸಿಐ ಪರ್ಕಳದ ಪೂರ್ವ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

















