ಬ್ರಹ್ಮಾವರ: ಜೆಸಿ ಕೃಷ್ಣಮೂರ್ತಿ ಹೈಕಾಡಿ ಇವರಿಗೆ ಅತ್ಯುನ್ನತ ಅಧ್ಯಕ್ಷ ರನ್ನರ್‌ ಪ್ರಶಸ್ತಿ

ಬ್ರಹ್ಮಾವರ: ಜೆಸಿಐ ಇಂಡಿಯಾ ವಲಯ15ರ ನಿಲುಮೆ 2023 ಮಧ್ಯಂತರ ಸಮ್ಮೇಳನದಲ್ಲಿ ಜೆಸಿ ಕೃಷ್ಣಮೂರ್ತಿ ಹೈಕಾಡಿ ಇವರಿಗೆ ಉತ್ತಮ ಘಟಕ ಅಧ್ಯಕ್ಷ ರನ್ನರ್‌ ಪ್ರಶಸ್ತಿ ಮತ್ತು ವಿಶೇಷ ಯೋಜನೆಯಲ್ಲಿ ವಿನ್ನರ್‌ ಪ್ರಶಸ್ತಿ ಸೇರಿದಂತೆ ಸುಮಾರು 12 ಪ್ರಶಸ್ತಿಗಳನ್ನು ಪಡೆದುಕೊಂಡರು.

2023ರ ಜೆಸಿಐ ಬ್ರಹ್ಮಾವರ ಸೇವಾಮೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸಂಸ್ಥೆಯಿಂದ ಹಲವಾರು ತರಬೇತಿ ಕಾರ್ಯಕ್ರಮ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ತರಬೇತಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಪುರಸ್ಕಾರ, ಅಶಕ್ತರಿಗೆ ವೈದೈಕೀಯ ನೆರವು, ವಿದ್ಯಾರ್ಥಿಗಳಗೆ ಉತ್ತಮ ತರಬೇತಿ, ಮಹಿಳೆಯರಿಗೆ ಆರೋಗ್ಯ ತರಬೇತಿ, ಸ್ವಾವಲಂಬನಾ ತರಬೇತಿ, ಬೇಸಿಗೆ ಶಿಬಿರ ಇನ್ನಿತರ ಕಾರ್ಯಕ್ರಮಗಳನ್ನು ಅತ್ಯುನ್ನತವಾಗಿ ನಡೆಸಿ ಪ್ರಶಸ್ತಿಗೆ ಭಾಜನರಾದರು.

ಸಂಸ್ಥೆಯ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಜೆಸಿ ಕೃಷ್ಣಮೂರ್ತಿ, ಭವಿಷ್ಯದಲ್ಲಿ ಇನ್ನೂ ಉತ್ತಮ ಕಾರ್ಯಕ್ರಮಗಳು ಸಂಸ್ಥೆಯ ವತಿಯಿಂದ ನಡೆಯಲಿದೆ. ಮುಂದಿನ ದಿನಗಳಲ್ಲಿ ಹೊಲಿಗೆ ತರಬೇತಿ, ಯಕ್ಷಗಾನ ತರಬೇತಿ ಇನ್ನಿತರ ಹಲವಾರು ತರಬೇತಿ ಸಂಸ್ಥೆಯ ಮೂಲಕ ನಡೆಯಲಿದೆ ಎಂದರು.