ದೇಶಕ್ಕೆ ಮಾರಕವಾಗಿದ್ದ ಆ್ಯಪ್ ನಿಷೇಧಿಸಿರುವುದು ಸ್ವಾಗತಾರ್ಹ: ವೀಣಾ ಎಸ್. ಶೆಟ್ಟಿ

ಉಡುಪಿ: ದೇಶದ ಆಂತರಿಕ ಸಧೃಢತೆಗೆ ಮಾರಕವಾಗಿದ್ದ ಹಾಗೂ ದೇಶದ ಬಹುಪಾಲು ಜನತೆಯ ದಾರಿ ತಪ್ಪಿಸುವ ಸಲುವಾಗಿ ಮನರಂಜನೆಯ ಹೆಸರಿನಲ್ಲಿ ನಾನಾ ರೀತಿಯ ಮುಖವಾಡಗಳನ್ನು ತೊಟ್ಟು  ರಾರಾಜಿಸುತ್ತಿದ್ದ 59 ಚೈನಾ ಆಪ್ ಗಳನ್ನು ಕೇಂದ್ರ ಸರ್ಕಾರ ದೇಶದಲ್ಲಿ ನಿಷೇಧ ಹೇರಿರುವುದು ಅಭಿನಂದನಾರ್ಹ ಎಂದು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತಿಳಿಸಿದ್ದಾರೆ
ದೇಶದ ಜನತೆ ಈಗ ಭಾರತೀಯ ಸಂಸ್ಕೃತಿಯನ್ನು ಮತ್ತು ಸ್ವದೇಶಿಯತೆಯನ್ನು ಮೈಗೂಡಿಸಲು ಸರಿಯಾದ ದಾರಿ ನಿರ್ಮಾಣವಾಗಿದೆ. ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸ್ವಾವಲಂಬನೆಯ ಬದುಕು ಸಾಗಿಸುವ ಅವಕಾಶ ಈಗ ಬಂದಿದೆ. ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದವರು ತಿಳಿಸಿದ್ದಾರೆ.