ಯೋಗಗುರು ರಾಜೇಂದ್ರ ಎಂಕಮೂಲೆಯವರಿಗೆ ಅಂತಾರಾಷ್ಟ್ರೀಯ ಪುರಸ್ಕಾರ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಯೋಗಗುರು ರಾಜೇಂದ್ರ ಎಂಕಮೂಲೆಯವರಿಗೆ ಅಂತಾರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಿದರು.ರಾಜೇಂದ್ರ ಎಂಕಮೂಲೆ ಅವರು ಆಸ್ಟ್ರೇಲಿಯಾ ಪುತ್ತಿಗೆ ಮಠದಲ್ಲಿ ಸಹಕಾರ ನೀಡುತ್ತಿದ್ದು, ನಿರಂತರವಾಗಿ ಯೋಗ ತರಗತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ದೇವರಲ್ಲಿ ಪ್ರಾರ್ಥಿಸಿ ಶುಭಸಂದೇಶ ನೀಡಿದರು.