ಸಿಎ ಭವನಕ್ಕೆ ಭೇಟಿ ನೀಡಿದ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಉಪಾಧ್ಯಕ್ಷ ಸಿ.ಎ.ರಂಜಿತ್ ಕುಮಾರ್

ಉಡುಪಿ: ಕುಂಜಿಬೆಟ್ಟುವಿನ ಸಿಎ ಭವನಕ್ಕೆ ಮಂಗಳವಾರದಂದು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಎ.ರಂಜಿತ್ ಕುಮಾರ್ ಅಗರ್ವಾಲ್ ಭೇಟಿ ನೀಡಿ ಸಂಸ್ಥೆಯ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತ ದೇಶದ ಅಭಿವೃದ್ಧಿಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಮಹತ್ವದಾಗಿದೆ. ದೇಶದಲ್ಲಿ ಹೊಸದಾಗಿ ಸಿಎ ತೇರ್ಗಡೆ ಮಾಡಿದ ಯುವ ಲೆಕ್ಕಪರಿಶೋಧಕರ ಅವ್ಯಶಕತೆ ಇದ್ದು ಈ ನಿಟ್ಟಿನಲ್ಲಿ ಕಾರ್ಯ ರೂಪಿಸುವಂತೆ ಅವರು ಕರೆ ನೀಡಿದರು. ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯ ನಡೆಸಿದರು. ಸಮಾರಂಭದಲ್ಲಿ ಸಂಸ್ಥೆ ವತಿಯಿಂದ ಸಿಎ ರಂಜಿತ್ ಕುಮಾರ್ ಅಗರ್ವಾಲ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಿಎ ಕೋತಾ ಎಸ್. ಶ್ರೀನಿವಾಸ್, ಸಿಎ ಪ್ರಸನ್ನ ಕುಮಾರ್,ಸಿಎ ಮಂಗೇಶ್ ಕಿನಾರೆ, ಸಿಎ ಗೀತಾ ಎ.ಬಿ. ಹಾಗೂ ಉಡುಪಿ ಸಿಎ ಸಂಸ್ಥೆಯ ಅಧ್ಯಕ್ಷ ಸಿಎ ಮಹೇಂದ್ರ, ಸ್ಥಾಪಕಾಧ್ಯಕ್ಷ ಸಿಎ ಗುಜ್ಜಾಡಿ ಪ್ರಭಾಕರ ನಾಯಕ್, ಸಿಎ ಲೋಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.