ಮೊದಲ ಟಿ20ಯಲ್ಲಿ ಬಾಂಗ್ಲಾ ವನಿತೆಯರನ್ನು ಮಣಿಸಿದ ಭಾರತ : ಹರ್ಮನ್​ಪ್ರೀತ್​​ ಅರ್ಧಶತಕ

ಢಾಕಾ (ಬಾಂಗ್ಲಾದೇಶ): ಶೇರ್-ಎ- ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೀಡಿದ್ದ 114 ರನ್​ನ​ ಸುಲಭ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ 3.4 ಓವರ್​ ಮತ್ತು 7 ವಿಕೆಟ್​ನಿಂದ ಭಾರತ ಗೆದ್ದುಕೊಂಡಿದೆ.ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತದ ವನಿತೆಯರ ಕ್ರಿಕೆಟ್​ ತಂಡ ನಾಯಕಿ ಹರ್ಮನ್​ಪ್ರೀತ್​ ಕೌರ್​ ಅವರ ಅರ್ಧ ಶತಕದ ನೆರವಿನಿಂದ ಮೊದಲ ಟಿ 20 ಪಂದ್ಯವನ್ನು ಗೆದ್ದುಕೊಂಡಿದೆ.ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಭರ್ಜರಿ ಜಯ ದಾಖಲಿಸಿದ್ದಾರೆ.

ಬೆನ್ನತ್ತಿದ ಭಾರತಕ್ಕೆ ಮೂರನೇ ಬಾಲ್​ನಲ್ಲೇ ಆರಂಭಿಕ ಆಘಾತ ಎದುರಾಯಿತು. ಶೆಫಾಲಿ ವರ್ಮಾ ಮೂರನೇ ಬಾಲ್​ಗೆ ಎಲ್​ಬಿಡಬ್ಲ್ಯುಗೆ ಬಲಿಯಾದರು. ನಂತರ ಬಂದ ಜೆಮಿಕಾ ರೋಡ್ರಿಗಸ್​ ಮತ್ತೋರ್ವ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಜೊತೆಗೆ ಉತ್ತಮ ಜೊತೆಯಾಟ ಆಡಿದರು.ಭಾರತದ ನಾಯಕಿ ಹರ್ಮನ್​ಪ್ರೀತ್​ ಕೌರ್​​ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾದೇಶ ವನಿತೆಯರ ತಂಡ ಶಥಿ ರಾಣಿ (22), ಸೋಭಾನಾ ಮೊಸ್ಟಾರಿ (23) ಮತ್ತು ಶೋರ್ನಾ ಅಕ್ಟರ್ (28) ಅವರ ರನ್​ ಸಹಾಯದಿಂದ ನಿಗದಿತ ಓವರ್​ ಅಂತ್ಯಕ್ಕೆ 5 ವಿಕೆಟ್​ ನಷ್ಟಕ್ಕೆ 114 ರನ್ ಗಳಿಸಿತು.

ಈ ಜೋಡಿ ಎರಡನೇ ವಿಕೆಟ್​ 21 ರನ್​ ಕಲೆ ಹಾಕಿತು. ಈ ವೇಳೆ 11 ರನ್​ ಗಳಿಸಿ ಆಡುತ್ತಿದ್ದ ಜೆಮಿಕಾ ವಿಕೆಟ್​ ಒಪ್ಪಿಸಿದರು. ನಂತರ ತಂಡವನ್ನು ನಾಯಕಿ ಹರ್ಮನ್​ಪ್ರೀತ್​ ಕೌರ್​ ಮತ್ತು ಉಪನಾಯಕಿ ಮಂಧಾನ ಮುನ್ನಡೆಸಿದರು. ನಾಯಕಿ ಮತ್ತು ಉಪನಾಯಕಿ ಸೇರಿಕೊಂಡು 70 ರನ್​ ಬೃಹತ್​ ಜೊತೆಯಾಟ ಆಡಿದರು. ಇದರಿಂದ ತಂಡ ಗೆಲುವಿನ ಸನಿಹಕ್ಕೆ ತಲುಪಿತು. ಗೆಲುವಿಗೆ 23 ರನ್​ ಬಾಕಿ ಇರುವಾಗ ಸ್ಮೃತಿ ಮಂಧಾನ ಸ್ಟಂಪ್​ ಔಟ್​ಗೆ ಬಲಿಯಾದರು. ಅವರು ಈ ಇನ್ನಿಂಗ್ಸ್​ನಲ್ಲಿ 34 ಬಾಲ್​ನಲ್ಲಿ 5 ಬೌಂಡರಿಯಿಂದ 38 ರನ್​ ಗಳಿಸಿದರು.

ಮಿನ್ನು ಮಣಿ, ಅನುಷಾ ಬಾರೆಡ್ಡಿ ಪಾದಾರ್ಪಣೆ: ಭಾರತವು ಆಲ್‌ರೌಂಡರ್ ಮಿನ್ನು ಮಣಿ ಮತ್ತು ಎಡಗೈ ಸ್ಪಿನ್ನರ್ ಅನುಷಾ ಬಾರೆಡ್ಡಿ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಂಡಿತು. ಇದು ಇವರ ಚೊಚ್ಚಲ ಪಂದ್ಯವಾಗಿದೆ. ನಾಯಕಿ ಮತ್ತು ಉಪನಾಯಕಿ ಕ್ಯಾಪ್​ ಕೊಟ್ಟು ಇಬ್ಬರನ್ನು ತಂಡಕ್ಕೆ ಸ್ವಾಗತಿಸಿದರು. ಆಲ್‌ರೌಂಡರ್ ಮಿನ್ನು ಮಣಿ ಚೊಚ್ಚಲ ಪಂದ್ಯದಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ವಿಕೆಟ್​ ಪಡೆದು ಮಿಂಚಿದರು. ಬಾಂಗ್ಲಾದೇಶ ಬಲಗೈ ಬ್ಯಾಟರ್ ಶಾಥಿ ರಾಣಿ ಅವರ ಕ್ಯಾಪ್​ ಕೊಟ್ಟು ಚೊಚ್ಚಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಸಿತು.

ಕೊನೆಯಲ್ಲಿ ನಾಯಕಿ ಕೌರ್​ ವಿಕೆಟ್​ ಕೀಪರ್​ ಯಾಸ್ತಿಕಾ ಭಾಟಿಯಾ ಜೊತೆಗೆ ಸೇರಿ ಪಂದ್ಯವನ್ನು ಗೆಲ್ಲಿಸಿದರು. ಕೌರ್​ 35 ಬಾಲ್​ ಎದುರಿಸಿ ಎರಡು ಸಿಕ್ಸ್​​ ಮತ್ತು 6 ಬೌಂಡರಿಯಿಂದ 54 ರನ್​ ಗಳಿಸಿ ಅಜೇಯರಾಗಿ ಉಳಿದರು. ಅವರ ಜೊತೆ ಯಾಸ್ತಿಕಾ ಭಾಟಿಕಾಯಾ 12 ಬಾಲ್​ನಲ್ಲಿ 9 ರನ್ ​ಗಳಿಸಿ ಅಜೇಯಾರಾಗಿ ಉಳಿದರು. ಕೌರ್​ ಮತ್ತು ಮಂಧಾನ ಇನ್ನಿಂಗ್ಸ್​​ ಸಹಾಯದಿಂದ ಭಾರತ 7 ವಿಕೆಟ್​ಗಳ ಜಯ ದಾಖಲಿಸಿತು. ಅರ್ಧಶತಕ ಗಳಿಸಿ ಗೆಲುವಿಗೆ ಕಾರಣರಾದ ನಾಯಕಿ ಕೌರ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.