ಮಣಿಪಾಲ: ಆಗಸ್ಟ್ 28 ರಂದು ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಕಟ್ಟಡ ಉದ್ಘಾಟನೆ

ಮಣಿಪಾಲ: ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಣಿಪಾಲ ಶಾಖೆಯ ಹವಾನಿಯಂತ್ರಿತ ಸ್ವಂತ ಕಟ್ಟಡದ ಉದ್ಘಾಟನಾ ಸಮಾರಂಭವು ಆಗಸ್ಟ್ 28 ಆದಿತ್ಯವಾರದಂದು ಬೆಳಿಗ್ಗೆ 10.30 ಗಂಟೆಗೆ ಮಣಿಪಾಲ ಅಲೆವೂರು ರಸ್ತೆಯ ಬಾಳಿಗಾ ಹೋಟೆಲ್ ಬಳಿ ನಡೆಯಲಿದ್ದು, ಶಾಸಕ ಕೆ. ರಘುಪತಿ ಭಟ್ ಉದ್ಘಾಟನೆ ನೆರವೇರಿಸಲಿದ್ದಾರೆ.

ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಭದ್ರತಾ ಕೊಠಡಿಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಪೇಂದ್ರ ನಾಯಕ್ ಮಾಜಿ ಅಧ್ಯಕ್ಷರು ಉಡುಪಿ ಜಿಲ್ಲಾ ಪಂಚಾಯತ್
, ನರಸಿಂಹ ಮೂರ್ತಿ ಸ್ಥಾಪಕ ಉಪಾಧ್ಯಕ್ಷರು ಆಟೋ ನಿರ್ವಾಹಕರ ಸಹಕಾರ ಸಂಘ, ಶ್ರೀಮತಿ ಕಲ್ಪನಾ ಸುಧಾಮ ನಗರಸಭಾ ಸದಸ್ಯರು, ಮಣಿಪಾಲ ಕೇದಾರನಾಥ ಕಿಶೋರ್ ಸ್ಥಾಪಕ ನಿರ್ದೇಶಕರು ಆಟೋ ನಿರ್ವಾಹಕರ ಸಹಕಾರ ಸಂಘ ಉಪಸ್ಥಿತರಿರಲಿದ್ದಾರೆ.

ಉಪಾಧ್ಯಕ್ಷ ವಿಠಲ ಪೂಜಾರಿ, ಪ್ರಧಾನ ವ್ಯವಸ್ಥಾಪಕ ಮನೋಹರ ದೇವಾಡಿಗ, ಶಾಖಾ ವ್ಯವಸ್ಥಾಪಕ ಶೇಖರ ಆಚಾರ್ಯ, ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ.