ಸಮಾಜಮುಖಿ ಕಾರ್ಯದ ಮೂಲಕ ಕಾರ್ಕಳ ಯುವ ಬಂಟರ ಸಂಘದ ಉದ್ಘಾಟನೆ

ಕಾರ್ಕಳ: ಮಿಯಾರಿನ ಭದ್ರಪಾಡಿಯ ಬಂಟ ಸಮುದಾಯದ ಬಡ ಕುಟುಂಬಕ್ಕೆ ₹30 ಸಾವಿರ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಕಾರ್ಕಳ ಯುವ ಬಂಟರ ಸಂಘ ಇಂದು ಉದ್ಘಾಟನೆಗೊಂಡಿತು.

ವಕೀಲ ಸುನಿಲ್ ಕುಮಾರ್ ಶೆಟ್ಟಿ ನೂತನ ಯುವ ಬಂಟರ ಸಂಘವನ್ನು ಉದ್ಘಾಟಿಸಿದರು.
ನೂತನ ಯುವ ಬಂಟರ ಸಂಘದ ಅಧ್ಯಕ್ಷರಾಗಿ ಅವಿನಾಶ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಶೆಟ್ಟಿ ಅವರು ಆಯ್ಕೆಯಾದರು.

ಈ ಸಂದರ್ಭದಲ್ಲಿ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸವಿತಾ ವಿಜಯ್ ಶೆಟ್ಟಿ, ವಿಜಯ್ ಶೆಟ್ಟಿ ಕಾರ್ಕಳ, ಪ್ರಾಣೇಶ್ ಶೆಟ್ಟಿ, ಸುಕೀರ್ತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮುಟ್ಲುಪಾಡಿ ಸುಹಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.