ಮಣಿಪಾಲ: ಅ.17 ರಂದು ತನುಜಾಸ್ ಮೈಂಡ್ ಥೆರಪಿ ಉದ್ಘಾಟನಾ ಕಾರ್ಯಕ್ರಮ

ಮಣಿಪಾಲ: ಖ್ಯಾತ ವ್ಯಕ್ತಿತ್ವ ತರಬೇತುಗಾರ್ತಿ ತನುಜಾ ಮಾಬೆನ್ ರವರ ತನುಜಾಸ್ ಮೈಂಡ್ ಥೆರಪಿ ಅ.17 ಸೋಮವಾರದಂದು 10 ಗಂಟೆಗೆ ಮಣಿಪಾಲದ ಕೆನರಾ ಬ್ಯಾಂಕ್ ನ ಎದುರು ಮನಿಸಿಪಲ್ ಕಾಂಪ್ಲೆಕ್ಸ್ ನ ಮೊದಲನೆ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದ್ದು, ಶಾಸಕ ಕೆ ರಘುಪತಿ ಭಟ್, ಮನಿಪಾಲ್ ಟೆಕ್ನಾಲಜೀಸ್ ನ ಕಾರ್ಯಾಧ್ಯಕ್ಷ ಗೌತಮ್ ಪೈ, ಶಿಕ್ಷಣತಜ್ಞೆ ಕೋಮಲ್ ಜೆನಿಫರ್ ಡಿ’ಸೋಜಾ ಭಾಗವಹಿಸಲಿದ್ದಾರೆ.

ಶನಿವಾರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾನಸಿಕ ತರಬೇತುಗಾರ್ತಿ ಮತ್ತು ಚಿಕಿತ್ಸಕಿ ತನುಜಾ ಮಾಬೆನ್, ತನುಜಾಸ್ ಮೈಂಡ್ ಥೆರಪಿನಲ್ಲಿ ಋಣಾತ್ಮಕ ಆಲೋಚನೆಗಳಿಂದ ದೂರವಿರುವುದು, ಭೂತಕಾಲದ ನೆನಪುಗಳನ್ನು ಮರೆಯುವುದು, ಭಯ ಮತ್ತು ಒತ್ತಡವನ್ನು ನಿಭಾಯಿಸುವುದು, ಗುರಿ ನಿರ್ಧಾರ, ಅತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು, ಉತ್ತಮ ಬಾಂಧ್ಯವ್ಯಗಳನ್ನು ಬೆಳೆಸಿಕೊಳ್ಳುವುದು, ಸೋಮಾರಿತನವನ್ನು ಜಯಿಸುವುದು, ಭಾವನೆಗಳನ್ನು ನಿರ್ವಹಿಸುವುದು ಮುಂತಾದುವುಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.