ಐಎಎಸ್, ಐಪಿಎಸ್, ಐಎಫ್ಎಸ್ ಸೇರಿ ಒಟ್ಟು 11 ಅಧಿಕಾರಿಗಳ ವರ್ಗಾವಣೆ; ರಾಜ್ಯ ಸರ್ಕಾರ ಮಹತ್ವದ ಆದೇಶ

ಬೆಂಗಳೂರು: ಆರು ಮಂದಿ ಐಎಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿದ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜತೆಗೆ 4 ಐಎಫ್‌ಎಸ್‌ ಅಧಿಕಾರಿಗಳು ಹಾಗೂ 1 ಐಪಿಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ.

ವರ್ಗಾವಣೆಯಾದ 6 ಐಎಎಸ್‌ ಅಧಿಕಾರಿಗಳು- ನಿಯೋಜನೆಗೊಂಡ ಹುದ್ದೆ:

  • ಗಂಗೂಬಾಯಿ ರಮೇಶ್‌ ಮಾನಕರ್‌ -ಆಯುಕ್ತರು, ಇಎಸ್‌ಐಎಸ್‌, ಕಾರ್ಮಿಕ ಇಲಾಖೆ, ಬೆಂಗಳೂರು.
  • ಎನ್‌.ಚಂದ್ರಶೇಖರ್‌ -ವ್ಯವಸ್ಥಾಪಕ ನಿರ್ದೇಶಕ, ರೇಷ್ಮೆ ಮಾರುಕಟ್ಟೆ ಮಂಡಳಿ, ಬೆಂಗಳೂರು.
  • ಎಸ್‌.ಜೆ.ಸೋಮಶೇಖರ್‌- ಆಯುಕ್ತ, ಗ್ರಾಮೀಣ ಅಭಿವೃದ್ದಿ, ಬೆಂಗಳೂರು.
  • ಟಿ.ಭೂಬಾಲನ್‌ -ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇಡಿಸಿಎಲ್‌ ನಿರ್ದೇಶಕ ಹುದ್ದೆಯ ಹೆಚ್ಚುವರಿ ಹೊಣೆ.
  • ಅಪರ್ಣಾ ರಮೇಶ್‌ -ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ (ಸವೀರ್‍ಸ್‌ ಅನಾಲಿಸಿಸ್‌), ಬೆಂಗಳೂರು.
  • ಕಾನಿಷ್ಕ -ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆಗಳು (ಜಾಗೃತ ದಳ), ಬೆಂಗಳೂರು.
  • ಐಪಿಎಸ್‌ ಅಧಿಕಾರಿ ಕೆಎಂ ಶಾಂತರಾಜು – ಎಸ್‌ಪಿ, ಆಂತರಿಕ ಭದ್ರತಾ ವಿಭಾಗ

4 ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ:

  • ಸ್ಮಿತಾ ಬಿದ್ದೂರ್ – ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ ಮತ್ತು ಐಸಿಟಿ)
  • ಪಿ.ಸಿ. ರೇ – ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕ)
  • ಮನೋಜ್ ಕುಮಾರ್ – ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜತೆಗೆ ಎಂಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆ (ಹೆಚ್ಚುವರಿ)
  • ಉಪೇಂದ್ರ ಪ್ರತಾಪ್ ಸಿಂಗ್ -ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ.