ಹಿರಿಯಡ್ಕ: ಸರಕಾರಿ ಶಾಲೆಯ‌ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಹಿರಿಯಡಕ: ತುಳು ಜಾನಪದ ಕಲಾವಿದ ರವೀಂದ್ರ ಪಾಣರವರು ಕಾಜಾರಗುತ್ತುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.
ಈ ಸಂದರ್ಭ ಶ್ರೀಮತಿ ಪ್ರಪುಲ್ಲ ರವೀಂದ್ರ ಪಾಣರ, ಬೇಬಿ ಶ್ರೀನಿಧಿ, ರವೀಂದ್ರ ಪಾಣರ, ಉದ್ಯಮಿ ಅನಿಲ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಗೌರಿ ಕೆ., ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲಾ ಶಿಕ್ಷಕರು, ಶಾಲಾ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.