ಹಿರಿಯಡಕ: ಮಾರ್ಗ ಮಧ್ಯೆಯೇ ರೌಡಿಶೀಟರ್ ಹತ್ಯೆ

ಹಿರಿಯಡಕ: ರೌಡಿ ಶೀಟರ್ ಒಬ್ಬನನ್ನು ದುಷ್ಕರ್ಮಿಗಳ ತಂಡ ಲಾಂಗ್ ನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಹಿರಿಯಡಕದ ಸಿಂಡಿಕೇಟ್ ಬ್ಯಾಂಕ್ ಎದುರಿನಲ್ಲಿ ಇಂದು ಮಧ್ಯಾಹ್ನ ವೇಳೆಗೆ ನಡೆದಿದೆ.

ಮೃತನನ್ನು ಪಡುಬಿದ್ರಿ ಇನ್ನಾದ ಕಿಶನ್ ಹೆಗ್ಡೆ (42) ಎಂದು ಗುರುತಿಸಲಾಗಿದೆ. ಈತ ರೌಡಿ ಶೀಟರ್ ಆಗಿದ್ದು, ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಳಿವೆ ಎಂದು ತಿಳಿದುಬಂದಿದೆ.

ಕಿಶನ್ ತನ್ನ ಕಾರಿನಲ್ಲಿ ಬರುತ್ತಿರುವ ಸಂದರ್ಭದಲ್ಲಿ ಇನೋವಾ ಮತ್ತು ರಿಡ್ಜ್ ಕಾರಿನಲ್ಲಿ ಬಂದಂತಹ ಎರಡು ದುಷ್ಕರ್ಮಿಗಳ ತಂಡ, ಹಿರಿಯಡಕದ ಸಿಂಡಿಕೇಟ್ ಬ್ಯಾಂಕ್ ಬಳಿ ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ. ಕಾರಿನಿಂದ ಇಳಿದು ಓಡಲು ಯತ್ನಿಸಿದ ಕಿಶನ್ ನನ್ನು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಿರಿಯಡಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.