ಹಿರಿಯಡ್ಕ: ನೆರೆ ಸಂತ್ರಸ್ತರಿಗೆ ದಿನ ಬಳಕೆ ವಸ್ತುಗಳ ಹಸ್ತಾಂತರ

ಹಿರಿಯಡ್ಕ: ಸುಧಾಕರ ಪೂಜಾರಿ ಅಭಿಮಾನಿ ಸಂಘ ಹಿರಿಯಡ್ಕ ಮತ್ತು ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಉಡುಪಿ ವಿಭಾಗ ಇವರ ಜಂಟಿ ಸಹಭಾಗಿತ್ವದಲ್ಲಿ ಉತ್ತರ ಕನ್ನಡದ ಬೆಳಗಾವಿಯ ಗೋಕಾಕ್ ಊರಿನ ನೆರೆ ಸಂತ್ರಸ್ತರಿಗೆ ಹಿರಿಯಡ್ಕ ಸಾರ್ವಜನಿಕರಿಂದ ಪಡೆದ ಆಹಾರ ಪದಾರ್ಥಗಳು, ಹೊಸ ಬಟ್ಟೆಗಳು ಮತ್ತು ದಿನಬಳಕೆಯ ವಸ್ತುಗಳನ್ನು ಆ.20ರಂದು ನೆರೆ ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.
ಒಟ್ಟು 20 ಜನರು ತೆರಳುವ ಮೂಲಕ ಅಲ್ಲಿನ ಜನರಿಗೆ ಕೆಲಸ ಮಾಡಿ ಸಹಕರಿಸಿದ್ದಾರೆ. ಸುಮಾರು 2 ಲಕ್ಷದಷ್ಟು ಬೆಲೆಬಾಳುವ ವಸ್ತುಗಳನ್ನು ಹಸ್ತಾಂತರಿಸಿದರು.