ಹಿಂಸಾಚಾರದ ಹಿಂದೆ ಭಯೋತ್ಪಾದಕರ ಕೈವಾಡ: ಶರಣ್ ಪಂಪ್ವೆಲ್

ಮಂಗಳೂರು: ಹಿಂಸಾಚಾರದ ಹಿಂದೆ ಭಯೋತ್ಪಾದಕರ ಕೈವಾಡ ಇದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಗಂಭಿರವಾಗಿ ಆರೋಪಿಸಿದ್ದಾರೆ.
ಕಾಶ್ಮೀರದಲ್ಲಿ ಆಗಿರುವ ಸ್ಥಿತಿ ಮಂಗಳೂರಲ್ಲಿ ನಡೆದಿದೆ. ಈ ಹಿಂಸಾಚಾರದ ಹಿಂದೆ ಭಯೋತ್ಪಾದಕರ ಕೈವಾಡ ಇದೆ ಎಂದೆನಿಸುತ್ತದೆ. ಹೀಗಾಗಿ ಮಂಗಳೂರು ಗಲಭೆ ಕುರಿತು ಎನ್ ಐಎ ತನಿಖೆ ನಡೆಸಲು ವಿಹಿಂಪ ಆಗ್ರಹಿಸುತ್ತದೆ. ಮಾತ್ರವಲ್ಲ, ಎನ್ ಐಎ ತನಿಖೆಗೆ ಕೇಂದ್ರ ಸರ್ಕಾರವೂ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಂಗಳೂರಲ್ಲಿ ನಡೆದ ಗಲಭೆ ಅತ್ಯಂತ ಗಂಭೀರ ಮತ್ತು ಆತಂಕಕಾರಿ. ನಗರದಲ್ಲಿ ನಡೆದಿರುವ ಈ ಘಟನೆಯನ್ನು ವಿಹಿಂಪ ಖಂಡಿಸುತ್ತದೆ ಎಂದರು.
ಪ್ರತಿಭನಟನೆಯ ವೇಳೆ ಪ್ರತಿಭಟನಕಾರರು ಮುಖಕ್ಕೆ ಬಟ್ಟೆ ಹಾಕಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಿಂದ ನೋವಾಗಿದೆ. ಇದು ಸರಿಯಲ್ಲ ಎಂದು ಶರಣ್ ಪಂಪ್ವೆಲ್ ಆಕ್ರೋಶ ವ್ಯಕ್ತಪಡಿಸಿದರು.