ಜಿಪಂ‌ ನೌಕರನಿಗೆ ಸೋಂಕಿಲ್ಲ: ಸರಕಾರಿಗುಡ್ಡೆ ಗ್ರಾಮಸ್ಥರು ನಿರಾಳ

ಉಡುಪಿ: ಕಟಪಾಡಿ ಸರಕಾರಿ ಗುಡ್ಡೆಯ ನಿವಾಸಿ ಜಿಪಂ ನೌಕರನ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಇದೀಗ ಗ್ರಾಮಸ್ಥರು ನಿರಾಳರಾಗಿದ್ದಾರೆ.
ಆರೋಗ್ಯ ಇಲಾಖೆಯ ಎಡವಟ್ಟಿನಿಂದ ಈತನಿಗೆ ಸೋಂಕು ಇದೆಯೆಂದು ಹಬ್ಬಿತ್ತು. ಅಲ್ಲದೆ, ಸರಕಾರಿಗುಡ್ಡೆ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿತ್ತು. ಇಲ್ಲಿನ ಜನರು ಆತಂಕದಿಂದ ದಿನ ದೂಡುವಂತಾಗಿತ್ತು.
ಎರಡ್ಮೂರು ಬಾರಿ ಯುವಕನ ಗಂಟಿನ ಮಾದರಿಯನ್ನು ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು.ಆದರೆ ಗೊಂದಲದ ವರದಿಯಿಂದ ಆತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ಅಲ್ಲದೆ ಯುವಕನ ಕುಟುಂಬಸ್ಥರು‌ ಕೂಡ ಎರಡು ಬಾರಿ ಪರೀಕ್ಷೆ ನಡೆಸಿದ್ದರು. ಇದೀಗ ಯುವಕನ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಆತನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.