ಬೆಂಗಳೂರು : ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದ ಹತ್ತು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಗುಂಜಾನ್ ಆರ್ಯ ಹಾಗೂ ಕುಶಾಲ್ ಚೌಕ್ಸೆ ಅವರನ್ನು ಇಂಟೆಲಿಜೆನ್ಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ ಹತ್ತು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳೂರು ಲಾ & ಆರ್ಡರ್ ಡಿಸಿಪಿಯಾಗಿ ಸಿದ್ದಾರ್ಥ್ ಗೋಯಲ್, ಬೆಳಗಾವಿ ಲಾ & ಆರ್ಡರ್ ಡಿಸಿಪಿಯಾಗಿ ರೋಹನ್ ಜಗದೀಶ್, ಬೆಂಗಳೂರು ಸೆಂಟರ್ ಆಯಂಟಿ ಟೆರರಿಸ್ಟ್ ಎಸ್.ಪಿಯಾಗಿ ಶಿವಾಂಶು ರಜಪೂತ್, ಉಡುಪಿ ಆಯಂಟಿ ನಕ್ಸಲ್ ಫೋರ್ಸ್ ಎಸ್.ಪಿ ಆಗಿ ಜಿತೇಂದ್ರ ಕುಮಾರ್ ದಯಾಮ, ಕೆಎಸ್ಆರ್ಪಿ ಬೆಟಾಲಿಯನ್ – 1 ಕಮ್ಯಾಂಡೆಂಟ್ ಆಗಿ ದೀಪನ್ ಎಂ.ಎನ್, ಬೆಂಗಳೂರು ವೈರ್ಲೆಸ್ ವಿಭಾಗದ ಎಸ್ಪಿಯಾಗಿ ಮಿಥುನ್ ಎಚ್ ಎನ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಐಪಿಎಸ್ ಅಧಿಕಾರಿಗಳಾದ ಪೃಥ್ವಿಕ್ ಶಂಕರ್ ಮತ್ತು ಕನಿಕ ಸಿಕ್ರಿವಾಲ್ ಅವರನ್ನು ಸಿಐಡಿ ಎಸ್.ಪಿಯಾಗಿ ನಿಯೋಜಿಸಲಾಗಿದೆ.












