ರಾಜ್ಯದಲ್ಲಿ ಎರಡು ವಾರ ವಿಕೇಂಡ್ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶ: ಸಭೆ, ಸಮಾರಂಭ ಮಿತಿ‌ ನಿಗದಿ; ನೈಟ್ ಕರ್ಪ್ಯೂ ಮುಂದುವರಿಕೆ

ಬೆಂಗಳೂರು; ಕೋವಿಡ್, ಒಮಿಕ್ರಾನ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎರಡು ವಾರ ಕಾಲ ವಿಕೇಂಡ್ ಕರ್ಪ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ತಜ್ಞರ ಸಭೆಯ ಬಳಿಕ, ಸಚಿವ ಆರ್. ಅಶೋಕ್ ಮಾಹಿತಿ ನೀಡಿದರು.

ಸದ್ಯ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಅನ್ನು ಮುಂದುವರಿಸಲಾಗಿದೆ. ಬೆಂಗಳೂರಿನಲ್ಲಿ 10 ಮತ್ತು 12 ತರಗತಿ ಹೊರತುಪಡಿಸಿ ಉಳಿದ ತರಗತಿಗಳಿಗೆ ರಜೆ ಘೋಷಿಸಲಾಗಿದೆ. ಥಿಯೇಟರ್, ಪಬ್, ಬಾರ್ 50:50 ರೂಲ್ಸ್ ಮಾಡಿ ಸರ್ಕಾರ ಆದೇಶ ಬಂದ್.