ಕರಾವಳಿಯಲ್ಲಿ ಕಾಡು ಬೆಳೆಸಲು ಜಪಾನ್ ನ “ಮಿಯಾವಾಕಿ ಕಾಡು” ಯೋಜನೆ ಜಾರಿ: ಕಟಪಾಡಿ ಮಹೇಶ ಶೆಣೈ

ಉಡುಪಿ:  ಅವಿಭಜಿತ ಜಿಲ್ಲೆಯ ಪರಿಸರವು ದಿನೇ ದಿನೇ ಕಲುಷಿತಗೊಳ್ಳುತ್ತಿದೆ. ನಾವಿನ್ನು ಎಚ್ಚೆತ್ತದಿದ್ದರೆ ಪರಿಸರದ ಜೊತೆ ನಮಗೂ ಕಷ್ಟಕಾಲ ಬರಲಿದೆ. ಪರಿಸರದಲ್ಲಿರುವ ಶುದ್ಧಗಾಳಿ, ಕುಡಿಯುವ ನೀರು ಮತ್ತು ಜೀವ ವೈವಿಧ್ಯಗಳನ್ನು ಸಂರಕ್ಷಿಸದಿದ್ದರೆ ಮುಂದೆ ಎಣಿಸಲಾಗದ ಘೋರ ಅನಾಹುತ ಸಂಭವಿಸಲಿದೆ.

ಜಿಲ್ಲೆಯಲ್ಲಿ ಜಪಾನ್ ದೇಶದ ಮಾದರಿಯಲ್ಲಿ ಮರಗಿಡಗಳನ್ನು ಬೆಳೆಸಿ ಆ ಮೂಲಕ ಪರಿಸರ ರಕ್ಷಣೆಗೆ ಇಲ್ಲಿನ ಸಾಮಾಜಿಕ ಸೇವಾ ಕಾರ್ಯಕರ್ತರು ಧ್ವನಿಯಾಗಲು ನಿರ್ಧರಿಸಿದ್ದಾರೆ ಎಂದು ಸಾವಯುವ ಬದುಕು ತಂಡದ ಸಂಯೋಜಕ ಕಟಪಾಡಿ ಮಹೇಶ ಶೆಣೈ ಹೇಳಿದ್ದಾರೆ.

ಅವರು ಬುಧವಾರ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪರಿಸರ ಸಂರಕ್ಷಣೆಗೆ ಜಪಾನ್‌ನ ಪರಿಸರ ತಜ್ಞರು ಮನುಷ್ಯನ ಉಳಿವಿಗಾಗಿ ಅಗತ್ಯವಿರುವ  ಬೆಳೆಸಲು ಕಂಡುಹಿಡಿದ ವಿಧಾನ “ಮಿಯಾವಾಕಿ ಕಾಡು”.ಎನ್ನುವ ಪರಿಕಲ್ಪನೆ.

ಈ  ವಿಶಿಷ್ಟ ವಿಧಾನದಲ್ಲಿ  ಮೂರು ಸೆಂಟ್ಸ್ ಜಾಗದಲ್ಲಿ 400 ಗಿಡಗಳನ್ನು ಬೆಳೆಸಬಹುದಾಗಿದೆ. ಇದನ್ನು  ಕರಾವಳಿಯಲ್ಲಿ  ಮೊದಲ ಬಾರಿಗೆ “ಸಾವಯವ ಬದುಕು ” ಸಂಸ್ಥೆ ಪರಿಚಯಿಸುತ್ತಿದೆ.  ಪ್ರಾಯೋಗಿಕವಾಗಿ ಅಕ್ಟೋಬರ್ 13 ರಂದು ಸಾಮಾಜಿಕ ಸೇವಾ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ, ರವಿ ಕಟಪಾಡಿ, ನಿತ್ಯಾನಂದ ಒಳಕಾಡು, ಕಟಪಾಡಿಯ ಗುರುಕೃಪಾ ಪೊಸಾರುನಲ್ಲಿ ಜಂಟಿಯಾಗಿ ಮಣ್ಣಿನ ವಿಶೇಷ ಪದರ ರಚನೆಗೆ ಚಾಲನೆ ನೀಡಲಿದ್ದಾರೆ. ಇದೊಂದು ಪರಿಸರಕ್ಕೆ ಪೂರಕವಾದ ಕೆಲಸವಾಗಲಿದೆ ಎಂದರು.

ಜನಪ್ರಿಯ ವಿಧಾನ:
ಈ ವಿಧಾನ  ಪ್ರಪಂಚಾದ್ಯಂತ  ಜನಪ್ರಿಯವಾಗಿದೆ. ಪಂಜಾಬ್, ಮುಂಬೈ, ಬೆಂಗಳೂರು ಮತ್ತು ಮುಂತಾದ ಕಡೆಗಳಲ್ಲಿ ಈ ಯೋಜನೆ ಜಾರಿಯಾಗಿದೆ. ಈ ಯೋಜನೆಯಿಂದ ಅರಣ್ಯದ ಸೃಷ್ಟಿ ಜಾಸ್ತಿಯಾಗಿದೆ

ಈ ಯೋಜನೆಯ ಮೊದಲ ಹಂತದಲ್ಲಿ  ಗಿಡ ಮರ ನೆಡಲು ಬೇಕಾಗುವಂತಹ ಮಣ್ಣಿನ ವಿಶೇಷ ಪದರವನ್ನು ರಚಿಸಲಾಗುತ್ತದೆ, ಎರಡನೇ ಹಂತದಲ್ಲಿ ಸಸಿಗಳನ್ನು ನೆಡಲಾಗುತ್ತದೆ.

ನಮ್ಮ ಜಿಲ್ಲೆಯಲ್ಲಿ ಎರಡು ಸೆಂಟ್ಸ್ ಜಾಗದಲ್ಲಿ 260 ಸಸಿಗಳನ್ನು ನೆಡುವ ಉದ್ದೇಶವಿದೆ.ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಗಿಡ ನೆಡುವ ಕಾರ್ಯಕ್ರಮವಿದೆ 260 ಸಾಮಾಜಿಕ ಕಳಕಳಿಯ ವ್ಯಕ್ತಿ ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಈ ಯೋಜನೆಗೆ ಚಾಲನೆ ನೀಡುತ್ತದೆ ಎಂದವರು ತಿಳಿಸಿದರು.