ಕುಂದಾಪುರ: ಕುಲಾಲ ಸಮಾಜ ಸಂಘದ ಕಟ್ಟಡ ನವೀಕರಣಕ್ಕೆ ಧನಸಹಾಯ

ಕುಂದಾಪುರ: ಕುಲಾಲ ಕ್ರೀಡೋತ್ಸವ- 2022ರಲ್ಲಿ ಉಳಿತಾಯವಾದ ಮೊತ್ತ 80400 ರೂ ಗಳನ್ನು ಕುಂದಾಪುರದ ಕುಲಾಲ ಸಮಾಜ ಸುಧಾರಕರ ಸಂಘದ ಕಟ್ಟಡ ನವೀಕರಣಕ್ಕೆ ಧನ ಸಹಾಯ ರೂಪದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ ಕುಲಾಲ ಹೆಮ್ಮಾಡಿ, ವಿಠ್ಠಲ ಕುಲಾಲ ಹೆಸ್ಕುತ್ತುರು, ಹರೀಶ ಕುಲಾಲ ಕೆದೂರು, ಮಂಜುನಾಥ ಕುಲಾಲ ನೆಲ್ಲಿಕಟ್ಟೆ, ಹರೀಶ ಕುಲಾಲ ಹೊಂಬಾಡಿ, ಶಂಕರ ಕುಲಾಲ ಮೊಳಹಳ್ಳಿ ಉಪಸ್ಥಿತರಿದ್ದರು.